Home ಟಾಪ್ ಸುದ್ದಿಗಳು ಸಚಿವ ನವಾಬ್ ಮಲಿಕ್ ವಿರುದ್ಧ ಮಾನನಷ್ಟ ಮೊಕದ್ದಮೆ: ಸಮೀರ್ ವಾಂಖೆಡೆ ತಂದೆ ನಿರ್ಧಾರ

ಸಚಿವ ನವಾಬ್ ಮಲಿಕ್ ವಿರುದ್ಧ ಮಾನನಷ್ಟ ಮೊಕದ್ದಮೆ: ಸಮೀರ್ ವಾಂಖೆಡೆ ತಂದೆ ನಿರ್ಧಾರ

ಮುಂಬೈ: ಡ್ರಗ್ಸ್ ಪ್ರಕರಣ ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎನ್.ಸಿ.ಬಿ ನಿರ್ದೇಶಕ ಸಮೀರ್ ವಾಂಖೆಡೆ ಅವರ ತಂದೆ ಜ್ಞಾನದೇವ್ ವಾಂಖೆಡೆ, ಮಹಾರಾಷ್ಟ್ರ ಸಚಿವ ಮತ್ತು ಎನ್.ಸಿ.ಪಿ ಮುಖಂಡ ನವಾಬ್ ಮಲಿಕ್ ವಿರುದ್ಧ ಬಾಂಬೆ ಹೈಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಇಂದು ಬೆಳಗ್ಗೆ ನಡೆದ ಸುದ್ದಿಗೋಷ್ಠಿಯಲ್ಲಿ ನವಾಬ್ ಮಲಿಕ್, ಮೋಹಿತ್ ಕಾಂಬೋಜ್ ಅವರ ಸಹಕಾರದೊಂದಿಗೆ ಸಮೀರ್ ವಾಂಖೆಡೆ ಅವರು ಡ್ರಗ್ಸ್ ಪ್ರಕರಣದ ಆರೋಪಿ ಆರ್ಯನ್ ಖಾನ್ ನನ್ನು ಅಪಹರಿಸಿದ ನಂತರ ಸುಲಿಗೆ ಸಂಚು ರೂಪಿಸಿದ್ದರು ಎಂಬ ಗಂಭೀರ ಅರೋಪ ಹೊರಿಸಿದ್ದರು.

ಮಾತ್ರವಲ್ಲ ಈ ಹಿಂದೆ ಮುಸ್ಲಿಮ್ ಆಗಿ ಜನಿಸಿದ ಸಮೀರ್, ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಎಸ್.ಸಿ ಕೋಟಾದಡಿಯಲ್ಲಿ ನೇಮಕಾತಿ ಪಡೆಯಲು ನಕಲಿ ಪ್ರಮಾಣಪತ್ರ, ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ನವಾಬ್ ಮಲಿಕ್ ಆರೋಪಿಸಿದ್ದರು.

ಎನ್.ಸಿ.ಬಿ ತಂಡ ಅಕ್ಟೋಬರ್ 2 ರಂದು ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪಾರ್ಟಿಯನ್ನು ಪತ್ತೆಹಚ್ಚಿತ್ತು. ಈ ಪ್ರಕರಣದಲ್ಲಿ ಆರ್ಯನ್ ಖಾನ್, ನೈಜೀರಿಯನ್ ಪ್ರಜೆಗಳನ್ನು ಒಳಗೊಂಡಂತೆ ಒಟ್ಟು 20 ಮಂದಿ ಬಂಧಿಸಿತ್ತು.

Join Whatsapp
Exit mobile version