Home ಟಾಪ್ ಸುದ್ದಿಗಳು ಬಿಜೆಪಿಯ ನಿರ್ಲಕ್ಷ್ಯ ಧೋರಣೆಗೆ ಬೇಸತ್ತು ಪಕ್ಷ ತೊರೆದ ಖ್ಯಾತ ಬಂಗಾಳಿ ನಟ

ಬಿಜೆಪಿಯ ನಿರ್ಲಕ್ಷ್ಯ ಧೋರಣೆಗೆ ಬೇಸತ್ತು ಪಕ್ಷ ತೊರೆದ ಖ್ಯಾತ ಬಂಗಾಳಿ ನಟ

ಕೋಲ್ಕತ್ತಾ: ಬಿಜೆಪಿ ಪಕ್ಷದ ನಿರಂತರ ನಿರ್ಲಕ್ಷ್ಯಧೋರಣೆಯಿಂದ ಬೇಸತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸುವುದಾಗಿ ಖ್ಯಾತ ಬಂಗಾಳ ನಟ, ರಾಜಕಾರಣಿ ಜಾಯ್ ಬ್ಯಾನರ್ಜಿ ಭಾನುವಾರ ತಿಳಿಸಿದ್ದಾರೆ.

ನಾನು ಸಾಮಾನ್ಯ ಜನರಿಗಾಗಿ ಕಾರ್ಯನಿರ್ವಹಿಸಲು ಇಚ್ಛೆಪಡುತ್ತೇನೆ ಮತ್ತು ಬಿಜೆಪಿಯ ಭಾಗವಾಗಿ ಮುಂದುವರಿದರೆ ಅದು ಸಾಧ್ಯವಿಲ್ಲ ಎಂಬ ಹಿನ್ನೆಲೆಯಲ್ಲಿ ಪಕ್ಷವನ್ನು ತ್ಯಜಿಸುತ್ತಿರುವುದಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

2014 ರಿಂದ ಬಿಜೆಪಿ ಸದಸ್ಯರಾಗಿದ್ದ ಬ್ಯಾನರ್ಜಿ ಎರಡು ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲನುಭವಿಸಿದ್ದರು. ಮಾತ್ರವಲ್ಲ 2017 ರಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು.

ಬಿಜೆಪಿ ಪಕ್ಷದ ಕೇಂದ್ರ ನಾಯಕತ್ವ ನನ್ನನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು, ಅಭದ್ರತೆಯಿಂದ ಜೀವಿಸುತ್ತಿದ್ದೇನೆ. ಹಿರಿಯ ಸದಸ್ಯನಾದ ನಾನು 2014 ರಲ್ಲಿ ಪಕ್ಷವನ್ನು ಸೇರಿದ್ದು, 2017 ರಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೆ ಈಗ ನನ್ನನ್ನು ನಿರ್ಲಕ್ಷಿಸಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯಿಂದ ಕೈಬಿಟ್ಟಿದೆ ಎಂದು ಉಲ್ಲೇಖಿಸಿದರು.

Join Whatsapp
Exit mobile version