Home ಟಾಪ್ ಸುದ್ದಿಗಳು ದೇಶದಲ್ಲಿ ರೂಪಾಯಿ ಮೌಲ್ಯ ಪಾತಾಳಕ್ಕಿಳಿಯುತ್ತಿದೆ ಆದರೆ ಬಿಜೆಪಿಗರು ಮಸೀದಿಯಲ್ಲಿ ಶಿವಲಿಂಗ ಹುಡುಕುತ್ತಿದ್ದಾರೆ: ಉದ್ಧವ್ ಠಾಕ್ರೆ

ದೇಶದಲ್ಲಿ ರೂಪಾಯಿ ಮೌಲ್ಯ ಪಾತಾಳಕ್ಕಿಳಿಯುತ್ತಿದೆ ಆದರೆ ಬಿಜೆಪಿಗರು ಮಸೀದಿಯಲ್ಲಿ ಶಿವಲಿಂಗ ಹುಡುಕುತ್ತಿದ್ದಾರೆ: ಉದ್ಧವ್ ಠಾಕ್ರೆ

ಮುಂಬೈ: ದೇಶದಲ್ಲಿ ಹಣದುಬ್ಬರ ಹೆಚ್ಚಾಗುತ್ತಿದೆ. ಡಾಲರ್ ಗಳ ಮುಂದೆ ರೂಪಾಯಿ ಮೌಲ್ಯ ಪಾತಾಳಕ್ಕಿಳಿಯುತ್ತಿದೆ.ಆದರೆ ಬಿಜೆಪಿಗರು ಮಾತ್ರ ಯಾವ ಮಸೀದಿಯ ಕೆಳಗೆ ಶಿವಲಿಂಗ ಪತ್ತೆಯಾಗುತ್ತದೆ ಎಂದು ಹುಡುಕುತ್ತಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಮುಂಬೈ ಹೊರವಲಯದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಮಾತಾಡಿದ ಅವರು ಬಿಜೆಪಿಯಿಂದಾಗಿ ಭಾರತ ಮುಜುಗರ ಅನುಭವಿಸಬೇಕಾಗಿ ಬಂದಿದೆ, ಬಿಜೆಪಿ ರಾಷ್ಟ್ರೀಯ ವಕ್ತಾರೆ ಪ್ರವಾದಿ ನಿಂದನೆ ಮಾಡಿದ್ದು ವಿದೇಶಗಳು ಭಾರತದೊಂದಿಗೆ ಕ್ಷಮೆಯಾಚಿಸುವಂತೆ ಒತ್ತಾಯಿಸುತ್ತಿದೆ. ಇದು ನಮ್ಮ ದೇಶದ ಹಿರಿಮೆಗೆ ದಕ್ಕೆ ತಂದಿದೆಯೇ ಹೊರತು ಕೇವಲ ಬಿಜೆಪಿ ಪಕ್ಷಕ್ಕೆ ಮಾತ್ರವಲ್ಲ ಎಂದು ಠಾಕ್ರೆ ಒತ್ತಿ ಹೇಳಿದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಕ್ಷಮೆಯಾಚಿಸುವಂತೆ ಮಾಡಿದ ಬಿಜೆಪಿ ವಕ್ತಾರೆಯನ್ನು ಉಚ್ಛಾಟಿಸಿದ್ದು ಮಾತ್ರವಲ್ಲ ದೇಶದ್ರೋಹದ ಪ್ರಕರಣದಲ್ಲಿ ಬಂಧಿಸಬೇಕೆಂಬ ಕೂಗು ದೇಶದಾದ್ಯಂತ ಕೇಳಿ ಬರುತ್ತಿದೆ.

Join Whatsapp
Exit mobile version