Home ಟಾಪ್ ಸುದ್ದಿಗಳು ಯಾರಾದರೂ ಕೈ ಕೊಟ್ಟರೆ ಹುಷಾರ್: ಪಕ್ಷದ ನಾಯಕರಿಗೆ ಡಿಕೆಶಿ ವಾರ್ನಿಂಗ್

ಯಾರಾದರೂ ಕೈ ಕೊಟ್ಟರೆ ಹುಷಾರ್: ಪಕ್ಷದ ನಾಯಕರಿಗೆ ಡಿಕೆಶಿ ವಾರ್ನಿಂಗ್

ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಈ ನಡುವೆ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಮ್ಮ ಶಾಸಕರಿಗೆ ಅಡ್ಡ ಮತದಾನ ಮಾಡದಂತೆ ವಾರ್ನಿಂಗ್ ಮಾಡಿದ್ದಾರೆ.

ರಾಜ್ಯಸಭೆ ಚುನಾವಣೆ ಹಿನ್ನೆಲೆ ಸಿಎಲ್‍ಪಿ ಸಭೆ ನಡೆಸಿದ ಡಿಕೆಶಿ, ತಮ್ಮ ಪಕ್ಷದ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ. ಅಡ್ಡ ಮತದಾನ ಆಗಬಾರದು. ಒಂದೇ ಒಂದು ಮತ ಅಡ್ಡಮತದಾನವಾದರೂ ಹುಷಾರ್.. ನಾನು ಬದುಕಿರುವವರೆಗೂ ನಿಮಗೆ `ಬಿ ಫಾರಂ’ ಸಿಗದಂತೆ ನೋಡಿಕೊಳ್ಳುತ್ತೇನೆ.

ಯಾರು ಅಡ್ಡ ಮತದಾನ ಮಾಡುತ್ತಾರೋ ಅವರ ರಾಜಕೀಯ ಭವಿಷ್ಯ ಮುಂದೆ ಕಷ್ಟವಾಗಲಿದೆ ಎಂದಿದ್ದಾರೆ. ಒಟ್ಟಿನಲ್ಲಿ ಡಿಕೆಶಿ ಮಾತು ತನ್ನದೇ ಪಕ್ಷದ ಶಾಸಕರ ಮೇಲೆ ಅಪನಂಬಿಕೆಯನ್ನು ಎತ್ತಿ ತೋರಿಸುತ್ತಿದ್ದು ಅಂಕಣದಲ್ಲಿ ಯಾವ ರೀತಿ ಆಟ ಮುಂದುವರಿಯುತ್ತದೆ ಎಂದು ಕಾದು ನೋಡಬೇಕಾಗಿದೆ.

Join Whatsapp
Exit mobile version