Home ಟಾಪ್ ಸುದ್ದಿಗಳು ರಸಗೊಬ್ಬ ಹಗರಣ | ಜಾರಿ ನಿರ್ದೇಶನಾಲಯದಿಂದ ಆರ್‌ಜೆಡಿ ಸಂಸದ ಬಂಧನ

ರಸಗೊಬ್ಬ ಹಗರಣ | ಜಾರಿ ನಿರ್ದೇಶನಾಲಯದಿಂದ ಆರ್‌ಜೆಡಿ ಸಂಸದ ಬಂಧನ

ನವದೆಹಲಿ : ರಸಗೊಬ್ಬರ ಹಗರಣದಲ್ಲಿ ಅಕ್ರಮ ಹಣಕಾಸು ಲೇವಾದೇವಿ ಮಾಡಿದ ಆರೋಪದಲ್ಲಿ ಆರ್‌ ಜೆಡಿ ರಾಜ್ಯಸಭಾ ಸಂಸದ ಅಮರೇಂದ್ರ ಧರಿ ಸಿಂಗ್‌ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.

ಹಣಕಾಸು ಲೇವಾದೇವಿ ತಡೆ ಕಾಯ್ದೆಯಡಿಯಲ್ಲಿ ಸಂಸದ ಸಿಂಗ್‌ ಮತ್ತು ಉದ್ಯಮಿಯೊಬ್ಬರನ್ನು ಬಂಧಿಸಲಾಗಿದೆ. ಇಪ್ಕೊ ಮತ್ತು ಇಂಡಿಯಾ ಪೊಟಾಷ್‌ ಲಿಮಿಟೆಡ್‌ ಕಂಪೆನಿಗಳಿಗೆ ಸಂಬಂಧಿಸಿದ ಹಗರಣ ಇದಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಕಳೆದ ತಿಂಗಳು ಸಿಬಿಐ ಪ್ರಕರಣ ದಾಖಲಿಸಿತ್ತು. ಸಂಸದ ಸಿಂಗ್‌ ಅವರು ಈ ಪ್ರಕರಣದಲ್ಲಿ ಶಾಮೀಲಾಗಿರುವ ಜ್ಯೋತಿ ಟ್ರೇಡಿಂಗ್‌ ಕಾರ್ಪೊರೇಶನ್‌ ಎಂಬ ಕಂಪೆನಿಯ ಹಿರಿಯ ಉಪಾಧ್ಯಕ್ಷರಾಗಿದ್ದಾರೆ ಎನ್ನಲಾಗಿದೆ.

Join Whatsapp
Exit mobile version