Home Uncategorized ಸಿದ್ದಾಪುರ | ಬೇಡಿಕೆ ಈಡೇರಿಸುವ ಭರವಸೆ: ಸತ್ಯಾಗ್ರಹ ನಿಲ್ಲಿಸಿದ ಪ್ರತಿಭಟನಾಕಾರರು

ಸಿದ್ದಾಪುರ | ಬೇಡಿಕೆ ಈಡೇರಿಸುವ ಭರವಸೆ: ಸತ್ಯಾಗ್ರಹ ನಿಲ್ಲಿಸಿದ ಪ್ರತಿಭಟನಾಕಾರರು

ಸಿದ್ದಾಪುರ: ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಗ್ರಾಮ ಪಂಚಾಯತಿಯ ಸ್ವಚ್ಛತಾ ಸಿಬ್ಬಂದಿಗಳ ಬೇಡಿಕೆಗಳನ್ನು ಈಡೇರಿಸುವ ಭರವಸೆಯ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ನಿಲ್ಲಿಸಿದರು. ಸ್ವಚ್ಛತಾ ಸಿಬ್ಬಂದಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರ ಕಿರುಕುಳದ ವಿರುದ್ಧ ಗ್ರಾಮ ಪಂಚಾಯತಿ ನೌಕರರ ಸಂಘದಿಂದ ಗ್ರಾಮ ಪಂಚಾಯತಿ ಎದುರು ಬೆಳಿಗ್ಗೆ ಉಪವಾಸ ಸತ್ಯಾಗ್ರಹ ಪ್ರಾರಂಭವಾಗಿತ್ತು.


ವಿರಾಜಪೇಟೆ ತಾಲ್ಲೂಕಿನ ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಎಂ ಯತ್ನಟ್ಟಿ ಅವರು ಸಿದ್ದಾಪುರ ಗ್ರಾಮ ಪಂಚಾಯತಿಗೆ ಭೇಟಿ ನೀಡಿದ ಬಳಿಕ ಗ್ರಾಮ ಪಂಚಾಯತಿ ಅಧ್ಯಕ್ಷೆ ರೀನಾ ತುಳಸಿ, ಗ್ರಾಮ ಪಂಚಾಯತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್ ಭರತ್, ಪಿಡಿಓ ಮೇದಪ್ಪ, ಪಿ.ಎಸ್.ಐ ಮೋಹನ್ ರಾಜ್, ಹೋರಾಟಗಾರರಾದ ಮಹದೇವ್ ಮತ್ತು ಹೆಚ್.ಬಿ ರಮೇಶ್ ಜೊತೆ ಸೇರಿ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಬಳಿಕ ಪ್ರತಿಭಟನಾಕಾರರ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನೀಡಿದ್ದರಿಂದ ಬೆಳಿಗ್ಗೆ ಪ್ರಾರಂಭವಾಗಿದ್ದ ಸತ್ಯಾಗ್ರಹವನ್ನು ಮಧ್ಯಾಹ್ನ 12 ಗಂಟೆಗೆ ನಿಲ್ಲಿಸಿದರು.

Join Whatsapp
Exit mobile version