Home ಟಾಪ್ ಸುದ್ದಿಗಳು ನೈಸರ್ಗಿಕ ಸಾವುಗಳನ್ನು ರಾಜಕೀಯಗೊಳಿಸುತ್ತಿದೆ: ಟಿಡಿಪಿ ವಿರುದ್ಧ ಜಗನ್ ಮೋಹನ್ ರೆಡ್ಡಿ ಆರೋಪ

ನೈಸರ್ಗಿಕ ಸಾವುಗಳನ್ನು ರಾಜಕೀಯಗೊಳಿಸುತ್ತಿದೆ: ಟಿಡಿಪಿ ವಿರುದ್ಧ ಜಗನ್ ಮೋಹನ್ ರೆಡ್ಡಿ ಆರೋಪ

ಅಮರಾವತಿ: ಪಶ್ಚಿಮ ಗೋದಾವರಿ ಜಿಲ್ಲೆಯ ಜಂಗಾರೆಡ್ಡಿಗುಡೆಂ ಪಟ್ಟಣದಲ್ಲಿ ನಡೆದ ಸಾವುಗಳನ್ನು ವಿರೋಧ ಪಕ್ಷ ತೆಲುಗು ದೇಶಂ (ಟಿಡಿಪಿ) ರಾಜಕೀಯಗೊಳಿಸುತ್ತಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

ಪ್ರತಿಪಕ್ಷಗಳು ಅಕ್ರಮ ಮದ್ಯದ ಬಗ್ಗೆ ಸುಳ್ಳು ಪ್ರಚಾರ ಮಾಡುವುದನ್ನು ಬಿಡಬೇಕು ಎಂದಿದ್ದಾರೆ.

ವಿಧಾನಸೌಧದಲ್ಲಿ ಬಜೆಟ್ ಮೇಲಿನ ಸಾಮಾನ್ಯ ಚರ್ಚೆ ಆರಂಭಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿ, ‘‘ನಗರ ವ್ಯಾಪ್ತಿಯಲ್ಲಿ 18 ಸಾವುಗಳು ದಾಖಲಾಗಿವೆ. ಸಾವಿನ ಪ್ರಮಾಣವು ದೇಶಾದ್ಯಂತ ಮತ್ತು ನಮ್ಮ ರಾಜ್ಯದಲ್ಲಿಯೂ ಸಹ 2 ಪ್ರತಿಶತ ಎಂದು ಅಂದಾಜಿಸಲಾಗಿದೆ, ಅಂದರೆ ಅನಾರೋಗ್ಯ, ವೃದ್ಧಾಪ್ಯ ಅಥವಾ ಅಪಘಾತಗಳಿಂದ ಕನಿಷ್ಠ 90 ಜನರು ಸ್ವಾಭಾವಿಕವಾಗಿ ಸಾಯುತ್ತಾರೆ. ಟಿಡಿಪಿಯು ಸತ್ಯವನ್ನು ತಿರುಚಿ ಸಹಜ ಸಾವುಗಳನ್ನು ರಾಜಕೀಯಗೊಳಿಸುತ್ತಿದೆ ಎಂದು ಅವರು ಆರೋಪಿಸಿದರು.

ರಾಜ್ಯದಲ್ಲಿ ಅಕ್ರಮ ಮದ್ಯ ತಡೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಆದೇಶ ನೀಡಲಾಗಿದೆ. ಅಕ್ರಮ ಮದ್ಯದಲ್ಲಿ ತೊಡಗಿರುವವರ ವಿರುದ್ಧ 13,000 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಿಎಂ ಹೇಳಿದರು.

Join Whatsapp
Exit mobile version