Home ಟಾಪ್ ಸುದ್ದಿಗಳು ಮುಂಬೈ | ಠಾಕ್ರೆ ಬಣ ತೊರೆದ ಸಂಸದ ಗಜಾನನ ಕೀರ್ತಿಕರ್

ಮುಂಬೈ | ಠಾಕ್ರೆ ಬಣ ತೊರೆದ ಸಂಸದ ಗಜಾನನ ಕೀರ್ತಿಕರ್

ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆಯ ಠಾಕ್ರೆ ಮತ್ತು ಶಿಂಧೆ ಬಣಗಳ ಮಧ್ಯೆ ಕಚ್ಚಾಟದ ಬೆನ್ನಲ್ಲೇ ಸಂಸದ ಗಜಾನನ ಕೀರ್ತಿಕರ್ ಅವರು ಠಾಕ್ರೆ ಬಣ ತೊರೆದು ಹಾಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೊಂದಿಗೆ ಗುರುತಿಸಿಕೊಂಡಿದ್ದಾರೆ.

ಶಿವಸೇನೆಯ 18 ಸಂಸದರ ಪೈಕಿ ಕೀರ್ತಿಕರ್ ಅವರು ಶಿಂಧೆ ಬಣ ಸೇರ್ಪಡೆಯಾಗುತ್ತಿರುವ 13ನೇ ಸಂಸದರಾಗಿದ್ದು, 56 ಶಾಸಕರ ಪೈಕಿ 40 ಶಾಸಕರು ಶಿಂಧೆ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಮುಂಬೈ ವಾಯವ್ಯ ಕ್ಷೇತ್ರದ ಸಂಸದ ಗಜಾನನ ಕೀರ್ತಿಕರ್ ಅವರು ಇಂದು ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು ಮತ್ತು ನಾವು ಅವರಿಗೆ ಸಾಮಾಜಿಕ ಮತ್ತು ರಾಜಕೀಯ ಪ್ರಗತಿಗೆ ಶುಭ ಹಾರೈಸಿದ್ದೇವೆ ಎಂದು ತಿಳಿಸಿದ್ದಾರೆ.

Join Whatsapp
Exit mobile version