ಮೊರ್ಬಿ ಸೇತುವೆ  ದುರಂತ; ಸಿ.ಟಿ. ರವಿ ಸಂತಾಪ

Prasthutha|

ಚಿಕ್ಕಮಗಳೂರು : ಗುಜರಾತಿನ ಮೊರ್ಬಿ ಸೇತುವೆ  ದುರಂತಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸಂತಾಪ ಸೂಚಿಸಿದ್ದಾರೆ.

- Advertisement -

ಈ ಬಗ್ಗೆ ಪ್ರತಿಕ್ರಿಯಿಸಿರುವ  ಅವರು, ಸೇತುವೆ ದುರಂತಕ್ಕೆ ತಾಂತ್ರಿಕ ಕಾರಣ ಮಾತ್ರವಲ್ಲ.ಜವಾಬ್ದಾರಿ ಇರುವವರು ಕೂಡ ಇದಕ್ಕೆ ಹೊಣೆಗಾರರು. ಘಟನೆ ನಡೆದ ಬಳಿಕ ಸಾಂತ್ವಾನ ಹೇಳುವುದಕ್ಕಿಂತ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.

ಸೇತುವೆಗೆ  ಕೇವಲ 100 ಜನರನ್ನು ಹೊರುವ ಸಾಮರ್ಥ್ಯ  ಇದೆ. ಐನೂರು ಜನರನ್ನು ಸೇತುವೆ ಮೇಲ್ಭಾಗದಲ್ಲಿ ಬಿಟ್ಟಿರುವುದೇ ಅಪರಾಧ. ಇದು ಜವಾಬ್ದಾರಿ ಹೊತ್ತವರ ದಿವ್ಯ ನಿರ್ಲಕ್ಷ್ಯ.ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ತಪ್ಪಸ್ಥಿತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.



Join Whatsapp
Exit mobile version