ಮಡಿಕೇರಿ: ದಸರಾಕ್ಕೆ ಹೆಚ್ಚಿನ ಅನುದಾನ ಬಿಡುಗಡೆಗೆ ಶಾಸಕ ರಂಜನ್ ಒತ್ತಾಯ

Prasthutha|

ಮಡಿಕೇರಿ: ದಸರಾ ಹಾಗೂ ಮಳೆ ಹಾನಿ ರಸ್ತೆಗಳ ದುರಸ್ತಿಗೆ 5 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ರಾಜ್ಯ ಸರಕಾರಕ್ಕೆ ಶಾಸಕ ರಂಜನ್ ಮನವಿ ಮಾಡಿದ್ದಾರೆ.

- Advertisement -

ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುವ ರಂಜನ್, ಮಡಿಕೇರಿಯಲ್ಲಿ ದಸರಾ ಉತ್ಸವವನ್ನು ಸುಮಾರು 25 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ. ಸರ್ಕಾರದ ವತಿಯಿಂದ ಪ್ರತಿ ವರ್ಷವು ದಸರಾ ಉತ್ಸವ ನಡೆಸಲು ರೂ.1 ಕೋಟಿ ಅನುದಾನ ಬಿಡುಗಡೆ ಮಾಡಲಾಗುತ್ತಿದ್ದು, ಅದ್ದೂರಿಯಾಗಿ ದಸರಾ ಉತ್ಸವ ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಬಾರಿಯೂ ಕೂಡ ಮಡಿಕೇರಿ ದಸರಾ ಉತ್ಸವ ನಡೆಸಲು ಹಾಗೂ ಇತ್ತೀಚೆಗೆ ಬಿದ್ದ ವಿಪರೀತ ಮಳೆಯಿಂದಾಗಿ ಮಡಿಕೇರಿಯ ಕೆಲವು ರಸ್ತೆಗಳು ಹಾಳಾಗಿದ್ದು, ರಸ್ತೆಗಳನ್ನು ದುರಸ್ತಿಪಡಿಸಿ ದಸರಾ ಉತ್ಸವ ನಡೆಸಲು ಈ ಬಾರಿ ರೂ. 5 ಕೋಟಿ ಅನುದಾನ ಬಿಡುಗಡೆ ಮಾಡಬೇಕೆಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಸರಕಾರಕ್ಕೆ ಮನವಿ ಮಾಡಿದ್ದಾರೆ.

Join Whatsapp
Exit mobile version