ನಾನೆಂದೂ ಎಂ.ಎಸ್ ಧೋನಿಯನ್ನು ಕ್ಷಮಿಸಲಾರೆ: ಯುವರಾಜ್ ಸಿಂಗ್ ತಂದೆ

Prasthutha|

ಹೊಸದಿಲ್ಲಿ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಸದಾ ದೂರುವ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಅವರು ಇದೀಗ ಮತ್ತೆ ಎಂ.ಎಸ್.ಧೋನಿ ವಿರುದ್ದ ಕಿಡಿಕಾರಿದ್ದಾರೆ.

- Advertisement -

ಭಾರತ ತಂಡದ ಪರ ಏಳು ಅಂತಾರಾಷ್ಟ್ರೀಯ ಪಂದ್ಯವಾಡಿರುವ ಯೋಗರಾಜ್ ಸಿಂಗ್ ಅವರು ತಮ್ಮ ಪುತ್ರನ ವೃತ್ತಿಜೀವನವನ್ನು ಧೋನಿ ಹಾಳು ಮಾಡಿದ ಎಂದು ಸದಾ ಕಿಡಿಕಾರುತ್ತಲೇ ಇರುತ್ತಾರೆ. ಆಗೊಮ್ಮೆ ಈಗೊಮ್ಮೆ ಸಾರ್ವಜನಿಕ ವೇದಿಕೆಯಲ್ಲಿ ಮಹೇಂದ್ರ ಸಿಂಗ್ ಧೋನಿ ವಿರುದ್ದ ಹೇಳಿಕೆ ನೀಡುತ್ತಾ ಇರುತ್ತಾರೆ.

ಇದೀಗ ಯೂಟ್ಯೂಬ್ ಚಾನೆಲ್ ಒಂದಕ್ಕೆ ಯೋಗರಾಜ್ ಸಿಂಗ್ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

- Advertisement -

“ನಾನೆಂದೂ ಎಂ.ಎಸ್.ಧೋನಿಯನ್ನು ಕ್ಷಮಿಸುವುದಿಲ್ಲ. ಅವರು ಮುಖವನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳಲಿ. ಆತ ದೊಡ್ಡ ಕ್ರಿಕೆಟಿಗ, ಆದರೆ ಆತ ನನ್ನ ಮಗನ ವಿರುದ್ದ ಏನು ಮಾಡಿದ್ದಾನೆ, ಅದೆಲ್ಲಾ ಇದೀಗ ಹೊರಬರುತ್ತಿದೆ. ಅದು ಜೀವನದಲ್ಲಿ ಎಂದೂ ಮರೆಯಲಾಗದು. ನಾನು ಎರಡು ವಿಷಯಗಳನ್ನು ಜೀವನದಲ್ಲಿ ಎಂದೂ ಮಾಡಿಲ್ಲ. ಮೊದಲನೆಯದಾಗಿ, ನನಗೆ ಕೆಟ್ಟದು ಮಾಡಿದ ಯಾರನ್ನೂ ಎಂದೂ ಕ್ಷಮಿಸಿಲ್ಲ. ಎರಡನೆಯದಾಗಿ, ನಾನೆಂದೂ ಅವರನ್ನೂ ತಬ್ಬಿಕೊಂಡಿಲ್ಲ, ಅದು ನನ್ನ ಕುಟುಂಬಿಕರೇ ಆಗಲಿ, ಅಥವಾ ಮಕ್ಕಳೇ ಆಗಿರಲಿ” ಎಂದು ಯೋಗರಾಜ್ ಸಿಂಗ್ ಅವರು ಹೇಳಿದ್ದಾರೆ



Join Whatsapp
Exit mobile version