Home ಟಾಪ್ ಸುದ್ದಿಗಳು ಬಿಜೆಪಿಯಲ್ಲಿ ಟಿಕೆಟ್’ಗಾಗಿ ಬೇಡುವ ಪರಿಸ್ಥಿತಿ ನನಗೆ ಬರಬಾರದಿತ್ತು: ಮಾಜಿ ಸಿಎಂ ಜಗದೀಶ್ ಶೆಟ್ಟರ್

ಬಿಜೆಪಿಯಲ್ಲಿ ಟಿಕೆಟ್’ಗಾಗಿ ಬೇಡುವ ಪರಿಸ್ಥಿತಿ ನನಗೆ ಬರಬಾರದಿತ್ತು: ಮಾಜಿ ಸಿಎಂ ಜಗದೀಶ್ ಶೆಟ್ಟರ್

ಹುಬ್ಬಳ್ಳಿ : ಬಿಜೆಪಿಯಲ್ಲಿ ಈ ಬಾರಿ ಹಲವು ಹಿರಿಯ ನಾಯಕರಿಗೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೈಬಿಟ್ಟಿದ್ದು, ಟಿಕೆಟ್ಗಾಗಿ ಪಟ್ಟು ಹಿಡಿದಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಸಮಾಧಾನ ಹೊರಹಾಕಿದ್ದಾರೆ.


ಇಂದು ಹುಬ್ಬಳ್ಳಿಯಲ್ಲಿ ತಮ್ಮ ಬೆಂಬಲಿಗರ ಜೊತೆಯಲ್ಲಿ ಸಭೆ ನಡೆಸಿ ಜಗದೀಶ್ ಶೆಟ್ಟರ್, ನನಗೆ ಬಿಜೆಪಿಯಲ್ಲಿ ಟಿಕೆಟ್’ಗಾಗಿ ಬೇಡುವ ಪರಿಸ್ಥಿತಿ ಸ್ಥಿತಿ ಬರಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


ಆರು ಬಾರಿ ಬಹುಮತದೊಂದಿದೆ ಗೆದ್ದಿದ್ದ ನನಗೆ ಬಿಜೆಪಿಯಲ್ಲಿ ಇಂತಹ ಸ್ಥಿತಿ ಬರಬಾರದಿತ್ತು. ಸಚಿವನಾಗಿ, ರಾಜ್ಯದ ಸಿಎಂ ಆಗಿ ನಾನು ಕೆಲಸ ಮಾಡಿದ್ದೇನೆ. ಆದರೆ ನನಗಿಂದು ಟಿಕೆಟ್’ಗಾಗಿ ಹಪಹಪಿಸುವ ಸ್ಥಿತಿ ಬಂದಿದೆ ಎಂದರು.

Join Whatsapp
Exit mobile version