Home ಟಾಪ್ ಸುದ್ದಿಗಳು ದಳದ ಮತಕ್ಕೆ ಗಾಳ : ರೆಸಾರ್ಟಿಗೆ ಗೈರಾದ ಐವರಿಂದ ಅಡ್ದಮತದಾನ ಸಾಧ್ಯತೆ

ದಳದ ಮತಕ್ಕೆ ಗಾಳ : ರೆಸಾರ್ಟಿಗೆ ಗೈರಾದ ಐವರಿಂದ ಅಡ್ದಮತದಾನ ಸಾಧ್ಯತೆ

ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಕೌಂಟ್ ಡೌನ್ ಶುರುವಾಗಿದೆ. 4 ಸ್ಥಾನಗಳಿಗೆ ಚುನಾವಣೆ ನಡೆಯುತಿದ್ದು, ಕಾಂಗ್ರೆಸ್-ಜೆಡಿಎಸ್ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಜೆಡಿಎಸ್ ಶಾಸಕರು ನಿನ್ನೆನೇ ಹೋಟೆಲ್‍ಗೆ ಶಿಫ್ಟ್ ಆಗಿದ್ದು, ಜೆಡಿಎಸ್‍ಗೆ ಅಡ್ಡಮತದಾನದ ಟೆನ್ಷನ್ ಶುರುವಾಗಿದೆ. ಅಸಮಾಧಾನಿತರು ಕೊನೆ ಕ್ಷಣದಲ್ಲಿ ಕೈಕೊಡುವ ಆತಂಕವೂ ಜೋರಾಗಿದೆ.

ಜೆಡಿಎಸ್ ಶಾಸಕಾಂಗ ಸಭೆಗೆ ಐವರು ಶಾಸಕರು ಗೈರಾಗಿದ್ದು, ಎ.ಟಿ ರಾಮಸ್ವಾಮಿ, ಜಿ.ಟಿ ದೇವೇಗೌಡ, ಶಿವಲಿಂಗೇಗೌಡ, ಶ್ರೀನಿವಾಸಗೌಡ, ಗುಬ್ಬಿ ಶ್ರೀನಿವಾಸ್ ಗೈರಾಗಿದ್ದರು. ರೆಬೆಲ್ಸ್ ಮನವೊಲಿಸಲು ಫೋನ್ ಮೂಲಕ ಎಚ್‍ಡಿಕೆ ಪೇಚಾಡುತ್ತಿದ್ದಾರೆ. ಜಿ.ಟಿ‌.ದೇವೇಗೌಡ ತನ್ನ ಆತ್ಮಸಾಕ್ಷಿಗೆ ಒಪ್ಪುವಂತಹ ಅಭ್ಯರ್ಥಿಗೆ ಮತ ಹಾಕುತ್ತೇನೆ ಎಂದು ಹೇಳಿದ್ದಾರೆ.

Join Whatsapp
Exit mobile version