Home ಟಾಪ್ ಸುದ್ದಿಗಳು ಶೂಟಿಂಗ್ ವೇಳೆ ಕುದುರೆ ಸಾವು: ನಿರ್ದೇಶಕ ಮಣಿರತ್ನಂ ಮೇಲೆ ಎಫ್ಐಆರ್

ಶೂಟಿಂಗ್ ವೇಳೆ ಕುದುರೆ ಸಾವು: ನಿರ್ದೇಶಕ ಮಣಿರತ್ನಂ ಮೇಲೆ ಎಫ್ಐಆರ್

ಹೈದರಾಬಾದ್: ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಚಾರಿತ್ರಿಕ ಚಿತ್ರದ ಶೂಟಿಂಗ್ ವೇಳೆ ಕುದುರೆ ಒಂದು ಸತ್ತಿದ್ದು‌, ಹೈದರಾಬಾದ್‌ ನ ಕುದುರೆ ಮಾಲಿಕ ನೀಡಿರುವ ದೂರಿನ ಮೇಲೆ ಮಣಿರತ್ನಂ ಮೇಲೆ ಎಫ್‌ ಐಆರ್ ದಾಖಲಾಗಿದೆ.

ಆಗಸ್ಟ್‌ ನಲ್ಲೇ ಇದು ನಡೆದಿದ್ದರೂ ಈಗ ಪೇಟಾ ಮತ್ತು ಎಡಬ್ಲ್ಯುಬಿಐ- ಎನಿಮಲ್ ವೆಲ್‌ ಫೇರ್ ಬೋರ್ಡ್ ಆಫ್ ಇಂಡಿಯಾ ಪ್ರಕರಣ ಕೈಗೆತ್ತಿಕೊಂಡಿರುವುದರಿಂದ ಮೊಕದ್ದಮೆ ಬಿಗಿಗೊಂಡಿದೆ.

ಬಿಸಿಲಿನಲ್ಲಿ ಒಂದೇ ಸಮನೆ ಕುದುರೆ ಬಳಸಿದ್ದರಿಂದ ದೇಹದ ನೀರು ಒಣಗಿ ಕುದುರೆ ಸತ್ತಿದೆ. ಇದು ಅಕ್ಷಮ್ಯ ಅಪರಾಧ ಎಂಬುದು ಪೇಟಾ ಹೇಳಿದೆ.

ಚೋಳ ರಾಜಸತ್ತೆಗೆ ಸಂಬಂಧಿಸಿದ ಪೊನ್ನಿಯಿನ್‌ ಸೆಲ್ವನ್‌ ನಲ್ಲಿ  ಐಶ್ವರ್ಯ ರೈ ಕೂಡ ನಟಿಸಿದ್ದಾರೆ.

Join Whatsapp
Exit mobile version