Home ಟಾಪ್ ಸುದ್ದಿಗಳು ಚಿನ್ನದ ಅಂಗಡಿಯಲ್ಲಿ ಕಳ್ಳತನ: ಓರ್ವನ ಬಂಧನ

ಚಿನ್ನದ ಅಂಗಡಿಯಲ್ಲಿ ಕಳ್ಳತನ: ಓರ್ವನ ಬಂಧನ

ಬೆಂಗಳೂರು: ಖರೀದಿಯ ನೆಪದಲ್ಲಿ ಎರಡು ಚಿನ್ನದ ಸರಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ವ್ಯಕ್ತಿಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಹೆಗ್ಗನಹಳ್ಳಿಯ ಸಂಜೀವಿನಿನಗರದ ರಮೇಶ್ ಕೆ.ಹೆಚ್(28)ಬಂಧಿತ ಆರೋಪಿ. ಆತನಿಂದ 3 ಲಕ್ಷ ಮೌಲ್ಯದ 60 ಗ್ರಾಂ ತೂಕದ ಮೂರು ಚಿನ್ನದ ಚೈನುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಡಿಸಿಪಿ ಲಕ್ಷ್ಮಣ ನಿಂಬರಗಿ ಅವರು ತಿಳಿಸಿದ್ದಾರೆ.


ಕಳೆದ ಆ.31ರಂದು ರಾತ್ರಿ 8ರ ವೇಳೆ ಮಾಗಡಿ ಮುಖ್ಯರಸ್ತೆ ಸುಂಕದಕಟ್ಟೆ ಇಲ್ಲಿರುವ ಕೃಷ್ಣ ಎಂಟರ್ ಪ್ರೈಸಸ್ ಅಂಡ್ ಜ್ಯೂಯಲರ್ಸ್ ಗೆ ಬಂದ ಆರೋಪಿಯು ಗ್ರಾಹಕನ ಸೋಗಿನಲ್ಲಿ ಅಂಗಡಿಗೆ ಬಂದು ಚಿನ್ನದ ಚೈನುಗಳನ್ನು ನೋಡುವಂತೆ ಖರೀದಿಯ ಎರಡು ಚಿನ್ನದ ಚೈನುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ.


ಈ ಸಂಬಂಧ ಅಂಗಡಿಯ ಮಾಲೀಕ ದಿನೇಶ್ ಅವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಕಾಮಾಕ್ಷಿಪಾಳ್ಯ ಪೊಲೀಸ್ ಇನ್ಸ್ಪೆಕ್ಟರ್ ಲೋಹಿತ್ ಮತ್ತವರ ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Join Whatsapp
Exit mobile version