Home ಟಾಪ್ ಸುದ್ದಿಗಳು ಜೆಇಇ ಪರೀಕ್ಷೆಯಲ್ಲಿ ಗೌರಬ್ ದಾಸ್ ರಾಜ್ಯದಲ್ಲೇ ಪ್ರಥಮ

ಜೆಇಇ ಪರೀಕ್ಷೆಯಲ್ಲಿ ಗೌರಬ್ ದಾಸ್ ರಾಜ್ಯದಲ್ಲೇ ಪ್ರಥಮ

ಬೆಂಗಳೂರು; ರಾಷ್ಟ್ರೀಯ ಮಟ್ಟದ ಅರ್ಹತಾ ಪರೀಕ್ಷೆ-ಜೆಇಇಯಲ್ಲಿ ಸಹಕಾರನಗರದ ನಾರಾಯಣ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಗೌರಬ್ ದಾಸ್ ಅವರ ಶೇಕಡಾ 100ರಷ್ಟು ಅಂಕ ಪಡೆದು ರಾಜ್ಯದಲ್ಲೇ ಮೊದಲ ಸ್ಥಾನ ಪಡೆದ ಕೀರ್ತಿಗೆ ಪಾತ್ರರಾಗಿದ್ದಾರೆ.

ಜೆಇಇ ಪರೀಕ್ಷೆಯ ಫಲಿತಾಂಶದಲ್ಲಿ ದೇಶಾದ್ಯಂತ 17 ವಿದ್ಯಾರ್ಥಿಗಳು ಶೇ 100ರಷ್ಟು ಆಂಕ‌ ಪಡೆದಿದ್ದು ಇದರಲ್ಲಿ ನಾರಾಯಣ ಸಮೂಹ ಶಿಕ್ಷಣ ಸಂಸ್ಥೆಗಳ 6 ವಿದ್ಯಾರ್ಥಿಗಳು ಸೇರಿದ್ದು ರಾಜ್ಯದಿಂದ ಈ ಸಾಧನೆ‌ ಮಾಡಿರುವ ಎಕೈಕ ವಿದ್ಯಾರ್ಥಿ ಗೌರಬ್ ದಾಸ್ ಅವರಾಗಿದ್ದಾರೆ.

ನಾರಾಯಣ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪುನೀತ್ ಕೊಥಾಪ  ಕಾರ್ಯ ನಿರ್ವಾಹಕ ನಿರ್ದೇಶಕಿ ಡಾ. ಸಿಂಧೂರ ನಾರಾಯಣ ನಿರ್ದೇಶಕಿ ಶರಣಿ ಅವರು ವಿದ್ಯಾರ್ಥಿ ಗೌರಬ್ ದಾಸ್ ಅವರನ್ನು ಅಭಿನಂದಿಸಿದ್ದಾರೆ.

Join Whatsapp
Exit mobile version