ರಾಜಕೀಯ ರಂಗದ ಲೈಂಗಿಕ ದೌರ್ಜನ್ಯ ತನಿಖೆಯಾಗಬೇಕು: ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಸಿ.ಮಂಜುಳಾ

Prasthutha|

‘ತೊಂದರೆಗೀಡಾದ ಮಹಿಳೆಯರು ಹೊರಗೆ ಬಂದು ಪ್ರತಿಭಟಿಸಬೇಕು’

- Advertisement -


ಮಂಗಳೂರು: ಸಿನಿಮಾ ರಂಗದಲ್ಲಿರುವ ಹಾಗೆ ರಾಜಕೀಯ ಪಕ್ಷಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಆಗಿದ್ದರೆ ತನಿಖೆಯಾಗಬೇಕು. ತೊಂದರೆಗೀಡಾದ ಮಹಿಳೆಯರು ಹೊರಗೆ ಬಂದು ಪ್ರತಿಭಟಿಸಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಸಿ.ಮಂಜುಳಾ ಹೇಳಿದ್ದಾರೆ.


ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮಹಿಳೆ ಯಾರ ಸರಕೂ ಅಲ್ಲ, ಅವಳು ಸಮಾಜಕ್ಕೋಸ್ಕರ ದುಡಿಯಬೇಕು ಎಂದು ರಾಜಕೀಯ ಪಕ್ಷಕ್ಕೆ ಬರುತ್ತಾಳೆ. ಸಮಾಜಕ್ಕೋಸ್ಕರ ಆಡಳಿತದ ಭಾಗವಾಗಿ ಕೆಲಸ ಮಾಡಲು ರಾಜಕೀಯಕ್ಕೆ ಬರುತ್ತಾಳೆ. ಅಂಥ ಸಂದರ್ಭದಲ್ಲಿ ಅವಳ ಮೇಲೆ ದೌರ್ಜನ್ಯ ಆದರೆ ಮೊದಲು ಅದನ್ನ ಪ್ರತಿಭಟಿಸಬೇಕು ಎಂದರು.

- Advertisement -


ಅದನ್ನು ಬಹಿರಂಗ ಮಾಡದೇ ಅನುಭವಿಸೋದು ಮಹಿಳೆ ತನಗೆ ತಾನು ಮಾಡಿಕೊಳ್ಳುವ ಅನ್ಯಾಯ ಎಂದು ಹೇಳಿದ್ದಾರೆ.


ರಾಜಕೀಯದಲ್ಲಿ ಇದ್ದರೂ ಇಂಥದ್ದನ್ನ ಹೊರಗೆ ತಂದರೆ ಮಾತ್ರ ಎಲ್ಲಾ ಪಕ್ಷಗಳು ಮಹಿಳೆಯರ ಸುರಕ್ಷತೆ ಬಗ್ಗೆ ಕ್ರಮ ವಹಿಸುತ್ತೆ. ಯಾವುದೇ ಪಕ್ಷ ಇದ್ದರೂ ಮಹಿಳೆಯರು ದೌರ್ಜನ್ಯದ ಬಗ್ಗೆ ಧ್ವನಿ ಎತ್ತಬೇಕು. ರಾಜಕಾರಣದಲ್ಲಿ ಲೈಂಗಿಕ ದೌರ್ಜನ್ಯ ಇದ್ದಲ್ಲಿ ಅದನ್ನು ಹೊರತಂದು ಹೋರಾಟ ಮಾಡಬೇಕು. ಎಂದು ಹೇಳಿದ್ದಾರೆ.



Join Whatsapp
Exit mobile version