ಎಲ್ಗಾರ್‌ ಪರಿಷತ್‌ ಪ್ರಕರಣ | ಸ್ತಾನ್ ಸ್ವಾಮಿಗೆ ಜೂ.18ರ ವರೆಗೂ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲು ಹೈಕೋರ್ಟ್‌ ನಿರ್ದೇಶನ

Prasthutha|

ಮುಂಬೈ : ಎಲ್ಗಾರ್‌ ಪರಿಷದ್‌ ಪ್ರಕರಣದಲ್ಲಿ ಬಂಧಿತರಾಗಿರುವ ಸಾಮಾಜಿಕ ಕಾರ್ಯಕರ್ತ ಸ್ತಾನ್‌ ಸ್ವಾಮಿ ಅವರು ಕೋವಿಡ್‌ ಸೋಂಕಿತರಾಗಿರುವುದರಿಂದ ಜೂ. 18ರ ವರೆಗೂ ಅವರಿಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡುವಂತೆ ಬಾಂಬೆ ಹೈಕೋರ್ಟ್‌ ನಿರ್ದೇಶಿಸಿದೆ.

- Advertisement -

ಸ್ವಾಮಿ ಅವರನ್ನು ಮೇ 28ರಂದು ತಲೋಜ ಜೈಲಿನಿಂದ ಖಾಸಗಿ ಆಸ್ಪತ್ರೆ ಹೋಲಿ ಫ್ಯಾಮಿಲಿ ಹಾಸ್ಪಿಟಲ್‌ ಗೆ ವರ್ಗಾಯಿಸಲಾಗಿತ್ತು.

ಆಸ್ಪತ್ರೆಗೆ ದಾಖಲಿಸಿದ ಬಳಿಕ ಅವರು ಕೋವಿಡ್‌ ಪಾಸಿಟಿವ್‌ ಸೋಂಕಿತರಾದುದು ಪತ್ತೆಯಾಗಿದೆ. ಎಲ್ಗಾರ್‌ ಪರಿಷದ್‌ ಪ್ರಕರಣಕ್ಕೆ ಸಂಬಂಧಿಸಿ 2020 ಅಕ್ಟೋಬರ್‌ ನಲ್ಲಿ ಬಂಧಿತರಾಗಿರುವ ಸ್ವಾಮಿ, ಅಲ್ಲಿಂದಾಚೆಗೆ ತಲೋಜ ಜೈಲಿನಲ್ಲಿದ್ದಾರೆ.

Join Whatsapp
Exit mobile version