ವೀರೇಂದ್ರ ಹೆಗ್ಗಡೆಯವರಿಗೆ ಮೇಣದ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದ ಭಕ್ತ..!

Prasthutha|

ಬೆಳ್ತಂಗಡಿ: ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರಿಗೆ ಬೆಂಗಳೂರಿನ ಭಕ್ತರೋರ್ವರು ಮೇಣದ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

- Advertisement -

ಪುಟ್ಟಪರ್ತಿಗೆ ವೀರೇಂದ್ರ ಹೆಗ್ಗಡೆ ಯವರ ಕುಟುಂಬ ಪ್ರವಾಸಕ್ಕೆ ಹೋದಾಗ ಈ ಪ್ರತಿಮೆಯನ್ನು ನೀಡಲಾಗಿದೆ. ಪ್ರತಿಮೆ ಕಂಡ ತಕ್ಷಣ ಹೆಗ್ಗಡೆ ಕುಟುಂಬ ಖುಷಿಯಾಗಿದೆ.

ಬೆಂಗಳೂರಿನ ಭಕ್ತರೊರ್ವರು ವೀರೇಂದ್ರ ಹೆಗ್ಗಡೆಯವರಿಗೆ ಸುಳಿವೇ ಸಿಗದಂತೆ ಆಶ್ಚರ್ಯಕರವಾಗಿ ಉಡುಗೊರೆಯನ್ನು ನೀಡಿದ್ದಾರೆ. ಶ್ವೇತ ವಸ್ತ್ರಧಾರಿಯಾಗಿ ನಿಂತಿರುವ ಹೆಗ್ಗಡೆಯವರ ಮೇಣದ ಪ್ರತಿಮೆಯನ್ನು ರಚಿಸಲಾಗಿದೆ.

- Advertisement -

ಈ ಮೇಣದ ಪ್ರತಿಮೆಯನ್ನು ಬೆಂಗಳೂರು ಮೂಲದ ಕಲಾವಿದರು ರಚಿಸಿದ್ದರು. ಅಕ್ಟೋಬರ್ ತಿಂಗಳಲ್ಲಿ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ವರ್ಧ್ಯುಂತ್ಸವ ನಡೆಯಲಿದ್ದು, ಈ ವೇಳೆ ಧರ್ಮಸ್ಥಳ ಕ್ಕೆ ಈ ಪ್ರತಿಮೆಯನ್ನು ತರಲಾಗುತ್ತದೆ ಎಂದು ತಿಳಿದು ಬಂದಿದೆ.



Join Whatsapp
Exit mobile version