Home ಕರಾವಳಿ ಕೋಟ್ಯಂತರ ರೂ. ಆಸ್ತಿ ಘೋಷಿಸುವ ಮಂತ್ರಿ, ಶಾಸಕರುಗಳಿಗೆ ವೇತನ ಹೆಚ್ಚಳ ಯಾಕೆ: ಇಂಟಕ್ ಪ್ರಶ್ನೆ

ಕೋಟ್ಯಂತರ ರೂ. ಆಸ್ತಿ ಘೋಷಿಸುವ ಮಂತ್ರಿ, ಶಾಸಕರುಗಳಿಗೆ ವೇತನ ಹೆಚ್ಚಳ ಯಾಕೆ: ಇಂಟಕ್ ಪ್ರಶ್ನೆ

ಮಂಗಳೂರು: ಚುನಾವಣಾ ಸಂದರ್ಭದಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಆದಾಯವನ್ನಾಗಿ ತೋರಿಸುವ ಶಾಸಕರು ಮಂತ್ರಿಗಳು ಮುಖ್ಯಮಂತ್ರಿಗಳಿಗೆ ಆದಾಯವನ್ನು ಏರಿಸುವ ಅಗತ್ಯವೇನಿತ್ತು. ಕಾರ್ಮಿಕರು ಇಂದಿಗೂ ಕನಿಷ್ಠ ಕೂಲಿಯಲ್ಲಿ ಜೀವನವನ್ನು ನಡೆಸುತ್ತಿದ್ದು, ಅವರಿಗೂ ಕೂಡ ದುಪ್ಪಟ್ಟಾಗಿ ಏರಿಕೆ ಮಾಡಿ ಎಂದು ಕಾರ್ಮಿಕ ಸಂಘಟನೆಯಾದ ಇಂಟಕ್ ದ.ಕ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ ಸುದ್ದಿಗೋಷ್ಟಿಯಲ್ಲಿ ಒತ್ತಾಯಿಸಿದ್ದಾರೆ.

ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜಸೇವೆಗಾಗಿ ಇರುವ ರಾಜಕೀಯ ಇದೀಗ ವೃತ್ತಿಪರ ಉದ್ಯೋಗವನ್ನಾಗಿ ಮಾಡುವತ್ತ ರಾಜ್ಯ ಸರಕಾರ ಮುಂದಾಗಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಆಪಾದಿಸಿರುವ ಅವರು ಪೊಲೀಸ್ ಇಲಾಖೆ, ಶಿಕ್ಷಕರು,ಅತಿಥಿ ಉಪನ್ಯಾಸಕರು  ಕಾರ್ಮಿಕ ವಲಯ ಮತ್ತಿತರ ದುಡಿಯುವ ವರ್ಗದವರನ್ನು ಕಡೆಗಣಿಸುತ್ತಿರುವ ಸರ್ಕಾರ ಅವರಿಗೆ ವೇತನ ಆಯೋಗ ನೀಡುವ ವೇತನವನ್ನು ಕೂಡಲು ಸರ್ಕಾರದಲ್ಲಿ ದುಡ್ಡಿಲ್ಲ ಎಂದು ತಳ್ಳಿ ಹಾಕಲಾಗುತ್ತಿದೆ. ಮೊದಲು ಕೊರೊನಾದಿಂದ ಉದ್ಯೋಗ ಕಳೆದುಕೊಂಡವರಿಗೆ ಉದ್ಯಮದಲ್ಲಿ ನಷ್ಟ ಹೊಂದಿರುವವರಿಗೆ ಬಡಜನತೆಗೆ ಮೊದಲು ನೆರವಾಗಬೇಕು. ಕರ್ನಾಟಕದ  ರಾಜ್ಯಪಾಲರು ಮದ್ಯ ಪ್ರವೇಶಿಸಿ ಈ ವೇತನ ಹೆಚ್ಚಳ ವನ್ನು ತಡೆ ಹಿಡಿಯಲು ಸರಕಾರಕ್ಕೆ ಸೂಚಿಸಬೇಕು.ನಮ್ಮ ಸಮಾನ ಮನಸ್ಕ ಕಾರ್ಮಿಕ ಸಂಘಟನೆ ನ್ಯಾಯಾಲಯದಲ್ಲಿ ಪ್ರಶ್ನಿಸುವ ಬಗ್ಗೆ ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ.

ಸರಕಾರ ನಡೆಸುವವರಿಗೆ ಒಂದು ನ್ಯಾಯ ಕಾರ್ಮಿಕರಿಗೊಂದು ನ್ಯಾಯವೆ? ಏಕೆ ತಾರತಮ್ಯ ಮಾಡುತ್ತಿದ್ದೀರಿ, ತಕ್ಷಣ ಕಾರ್ಮಿಕ ಹಾಗೂ ಕಡಿಮೆ ವೇತನ ದುಡಿಯುವ ವರ್ಗದವರಿಗೂ ತಕ್ಷಣ ಸರಕಾರ ದುಪ್ಪಟ್ಟು ವೇತನವನ್ನು ಘೋಷಿಸಬೇಕು ಎಂದು ಇಂಟಕ್ ರಾಜ್ಯ ಮುಖಂಡ ಪಿ.ಕೆ ಸುರೇಶ್ ಒತ್ತಾಯಿಸಿದರು. ರಾಜ್ಯದ ಈ ತಾರತಮ್ಯ ನೀತಿಯನ್ನು  ಹಾಗೂ ಯಾವುದೇ  ಚರ್ಚೆ ಇಲ್ಲದೆ ವೇತನ ಏರಿಸಿಕೊಂಡಿರುವ ರಾಜ್ಯದ  ಬಿಜೆಪಿ ಸರಕಾರದ ನಡೆಯನ್ನು ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಶ್ನಿಸಬೇಕಿದೆ. ಪ್ರಧಾನಿ ಮೋದಿಯವರ ಮಾತಿಗೆ ಬೆಲೆ ನೀಡಿ ಎಂದು ಮಧ್ಯಮವರ್ಗ ಹಾಗೂ ಉಳ್ಳವರು ಗ್ಯಾಸ್ ಸಬ್ಸಿಡಿಯನ್ನು ಬಿಟ್ಟುಕೊಟ್ಟು ದೇಶದ ಅಭಿವೃದ್ಧಿಯಲ್ಲಿ ಕೈಜೋಡಿಸಿದ್ದಾರೆ. ಆದರೆ ರಾಜ್ಯದ ಸರಕಾರದ ಮಂತ್ರಿಗಳು ಶಾಸಕರು ಕೋರೋಣ ಸಂದರ್ಭದಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿದ್ದಾಗ ತಮ್ಮ ವೇತನ ಬತ್ತೆಯನ್ನ ದುಪ್ಪಟ್ಟಿ ಮಾಡಿಕೊಂಡು ಬೊಕ್ಕಸಕ್ಕೆ ಹೊರೆ ಹೊರಿಸಿರುವುದು ಅನ್ಯಾಯದ ಕ್ರಮವಾಗಿದೆ.ಜನರ ತೆರಿಗೆ ಹಣದಲ್ಲಿ ಇಂತಹ ಕ್ರಮ ಕೈಗೊಳ್ಳುವ ಮೊದಲು ಜನಾಭಿಪ್ರಾಯ ಆಲಿಸುವ ಕೆಲಸವಾಗಬೇಕು ಎಂದು ಆಗ್ರಹಿಸಿದರು.

Join Whatsapp
Exit mobile version