ಏಪ್ರಿಲ್ 1ರವರೆಗೆ ಗೋಧಿ ಕೊಳ್ಳಲು ರಾಜ್ಯಗಳಿಗೆ ಕೇಂದ್ರದ ಸೂಚನೆ

Prasthutha|

ನವದೆಹಲಿ: ಗೋಧಿ ಬೆಳೆಯುವ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಕ್ಕೂಟ ಸರಕಾರವು ಖರೀದಿ ಕಾಲ ಬೇಗ ಮುಗಿಯುವುದರಿಂದ ಮೇ 31ರವರೆಗೆ ಕೊಳ್ಳುವಿಕೆ ಮುಂದುವರಿಸುವಂತೆ ಸೂಚಿಸಿದೆ. ಮೇ 15ರ ಹೇಳಿಕೆಯಲ್ಲಿ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯವು ಈ ಸೂಚನೆ ಕೊಟ್ಟಿದೆ.

- Advertisement -


ಗೋಧಿ ಖರೀದಿ ಅವಧಿಯನ್ನು ಹೆಚ್ಚಿಸುವುದರಿಂದ ರೈತರಿಗೆ ಅನುಕೂಲ ಆಗುತ್ತದೆ ಎಂದು ಸಚಿವಾಲಯ ಹೇಳಿದೆ. ಹಾಗೆಯೇ ಕೇಂದ್ರೀಯ ಖರೀದಿಯಡಿ ಗೋಧಿ ಖರೀದಿ ಮುಂದುವರಿಸಲು ಎಫ್ ಸಿಐ- ಭಾರತೀಯ ಆಹಾರ ನಿಗಮಕ್ಕೆ ಕೂಡ ಸಚಿವಾಲಯ ತಿಳಿಸಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಗೋಧಿ ಕೊಳ್ಳುವ ಅವಧಿಯನ್ನು ಅಧಿಕರಿಸುವಂತೆ ಕೇಳಿದ್ದರಿಂದ ಈ ತೀರ್ಮಾನ ಕೈಗೊಳ್ಳಲಾಯಿತು ಎಂದೂ ಸಚಿವಾಲಯ ತಿಳಿಸಿದೆ.


ಕೇಂದ್ರದ ಒಗ್ಗೂಡಿಸುವಿಕೆಯಡಿ 2022-23ರ ರಬಿ ಕೊಯ್ಲು ಮಾರುಕಟ್ಟೆ ಕಾಲದಲ್ಲಿ ಮಧ್ಯ ಪ್ರದೇಶ, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಗುಜರಾತ್, ಬಿಹಾರ, ರಾಜಸ್ತಾನಗಳಲ್ಲಿ ಗೋಧಿ ಖರೀದಿ ನಡೆಯುತ್ತದೆ. ರಬಿ ಕೊಯ್ಲು ಮಾರ್ಚ್ ಏಪ್ರಿಲ್ ಗಳಲ್ಲಿ ನಡೆಯುತ್ತದೆ.

- Advertisement -


ಕೇಂದ್ರ ಧಾನ್ಯ ಒಗ್ಗೂಡಿಸುವಿಕೆಯಡಿ ಗೋಧಿ ಖರೀದಿಯು 2022-23ರಲ್ಲಿ 2021-21ಕ್ಕಿಂತ ಕಡಿಮೆ ಆಗಿದೆ. ಅದಕ್ಕೆ ಕಾರಣ ಸರಕಾರದ ದರಕ್ಕಿಂತ ಹೆಚ್ಚು ದರ ಹೊರಗೆ ಸಿಗುತ್ತಿರುವುದರಿಂದ ರೈತರು ಕಾಸಗಿ ವ್ಯಾಪಾರಿಗಳಿಗೆ ಗೋಧಿ ಮಾರುತ್ತಿದ್ದಾರೆ.
ಈ ಕಾರಣಕ್ಕೆ ಮೇ 13ರಂದು ಕೇಂದ್ರ ಸರಕಾರವು ಗೋಧಿ ರಫ್ತು ಮಾಡುವುದಕ್ಕೆ ತಡೆ ನೀಡಿದೆ. ನೆರೆಯ ಮತ್ತು ಆಹಾರ ಕೊರತೆಯ ದೇಶಗಳಿಗೆ ಮೊದಲೇ ಹಣ ನೀಡಿ ಆಗಿರುವ ಒಪ್ಪಂದದ ಮಟ್ಟಿಗೆ ಮಾತ್ರ ಈಗ ರಫ್ತು ಮಾಡಲು ಅವಕಾಶವಿದೆ.
2021-22ರಲ್ಲಿ 367 ಲಕ್ಷ ಮೆಟ್ರಿಕ್ ಟನ್ ಗೋಧಿ ಖರೀದಿ ಆಗಿದ್ದರೆ, 2022-23ರಲ್ಲಿ ಮೇ 14ರವರೆಗೆ 180 ಲಕ್ಷ ಮೆಟ್ರಿಕ್ ಟನ್ ಗೋಧಿ ಖರೀದಿ ಮಾತ್ರ ಆಗಿದೆ.
2021-22ರಲ್ಲಿ ಈ ಕೊಳ್ಳುವಿಕೆಯಲ್ಲಿ ಬೆಂಬಲ ಬೆಲೆಯಾಗಿ 16.83 ಲಕ್ಷ ರೈತರಿಗೆ ರೂ. 36,208 ಕೋಟಿ ಸಂದಾಯವಾಗಿದೆ ಎಂದೂ ಸಚಿವಾಲಯ ಹೇಳಿದೆ.

Join Whatsapp
Exit mobile version