ಒಂದೇ ದಿನ ಹೃದಯಾಘಾತದಿಂದ ಮೃತಪಟ್ಟ ಸಹೋದರರು!

Prasthutha|

ಕೊಲ್ಲೂರು: ಒಂದೇ ದಿನ ಒಂದೇ ಮನೆಯಲ್ಲಿ ಇಬ್ಬರು ಸಹೋದರರು ಹೃದಯಾಘಾತಕ್ಕೀಡಾಗಿ ಮೃತಪಟ್ಟ ಸೇರಿದ ಘಟನೆ ಚಿತ್ತಾಪುರ ತಾಲೂಕಿನ ಕೊಲ್ಲೂರು ಗ್ರಾಮದಲ್ಲಿ ಸಂಭವಿಸಿದೆ.

- Advertisement -

ಹಂಪಣ್ಣ ಸಿದ್ದಣ್ಣ ಪೂಜಾರಿ (60) ಹಾಗೂ ನಾಗಪ್ಪ ಸೋಮಲಿಂಗಪ್ಪ ಪೂಜಾರಿ (62) ಮೃತರು. ವೃತ್ತಿಯಲ್ಲಿ ರೈತರಾಗಿದ್ದ ಈ ಇಬ್ಬರೂ ಸಹೋದರರು ಒಂದೇ ಗಳಿಗೆಯಲ್ಲಿ ಸಾವಿಗೀಡಾಗಿದ್ದಾರೆ.

ನಾಗಪ್ಪ ಎಂಬುವವರಿಗೆ ಶುಕ್ರವಾರ ರಾತ್ರಿ 11:30ಕ್ಕೆ ಎದೆ ನೋವು ಕಾಣಿಸಿಕೊಂಡಿದೆ. ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಕೊನೆ ಉಸಿರೆಳೆದಿದ್ದಾರೆ. ಹಿರಿಯ ಸಹೋದರ ನಾಗಪ್ಪನನ್ನು ಆಸ್ಪತ್ರೆಗೆ ಸಾಗಿಸಿ ಮನೆಗೆ ಬಂದಿದ್ದ ಹಂಪಣ್ಣ ಕೂಡ ಹಠಾತ್ ಎದೆ ನೋವಿನಿಂದ ಬಳಲಿದ್ದಾರೆ. ಹಿರಿಯ ಅಣ್ಣನ ಶವ ಮನೆಯಲ್ಲಿರುವಾಗಲೇ ತಮ್ಮನೂ ಮೃತಪಟ್ಟಿದ್ದಾರೆ.

- Advertisement -

ಶನಿವಾರ ಮಧ್ಯಾಹ್ನ ಇಬ್ಬರು ಸಹೋದರರ ಅಂತ್ಯಸಂಸ್ಕಾರವನ್ನು ಗ್ರಾಮದ ಸ್ವಂತ ಜಮೀನಿನಲ್ಲಿ ನೆರವೇರಿಸಲಾಯಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.

Join Whatsapp
Exit mobile version