Home ಟಾಪ್ ಸುದ್ದಿಗಳು ಸುಟ್ಟುಹೋದ ಕಾರಿನಲ್ಲಿ ಶವಪತ್ತೆ: ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್: ನಾಲ್ಕು ಜನರ ಬಂಧನ

ಸುಟ್ಟುಹೋದ ಕಾರಿನಲ್ಲಿ ಶವಪತ್ತೆ: ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್: ನಾಲ್ಕು ಜನರ ಬಂಧನ

ಕುಂದಾಪುರ: ಬೈಂದೂರು ಸಮೀಪದ ವತ್ತಿನೆಣೆ ಎಂಬಲ್ಲಿ ಜುಲೈ 13 ರ ಮುಂಜಾನೆ ಜನನಿಬಿಡ ಪ್ರದೇಶದಲ್ಲಿ ಸುಟ್ಟ ಕಾರೊಂದು ಪತ್ತೆಯಾಗಿತ್ತು. ಕಾರಿನೊಳಗೆ ಅರೆಬೆಂದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವವೂ ಪತ್ತೆಯಾದ ಘಟನೆಯೊಂದು ಬೆಳಕಿಗೆ ಬಂದ ನಂತರ ಪೊಲೀಸರ ತನಿಖೆ ವೇಗ ಪಡೆದುಕೊಂಡಿತ್ತು. ಈಗ ಘಟನೆಗೆ ಸ್ಫೊಟಕ ತಿರುವು ದೊರಕಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಸಹಿತ 4 ಜನರನ್ನು ಪೊಲೀಸರು ವಶಕ್ಕೆ ಬಂಧಿಸಿದ್ದಾರೆ.

ಸುಟ್ಟು ಹೋದ ಕಾರಿನ ಚಾಸಿಸ್ ಅನ್ನು ಫೊರೆನ್ಸಿಕ್ ತಜ್ಞರ ಸಹಾಯದಿಂದ ಪರಿಶೀಲಿಸಿ, ಮಾಲಕನ ವಿವರಗಳನ್ನು ಪತ್ತೆಹಚ್ಚಲಾಗಿದ್ದು, ಕಾರಿನ ಮಾಲಕ ಕಾರ್ಕಳ ತಾಲೂಕಿನ ಮಾಳ ಗ್ರಾಮದ ನಿವಾಸಿ ಸದಾನಂದ ಶೇರಿಗಾರ್ (54) ಎಂದು ಗುರುತಿಸಲಾಗಿತ್ತು. ಆತನೇ ಕಾರಿನಲ್ಲಿ ಸಿಕ್ಕಿ ಬಿದ್ದು ಸತ್ತು ಹೋಗಿದ್ದಾನೆ ಎಂದು ಮೊದಲಿಗೆ ಭ್ರಮಿಸಲಾಗಿತ್ತಾದರೂ ಈಗ ಘಟನೆಗೆ ತಿರುವು ದೊರಕಿದೆ.

ಕಾರ್ಕಳದ ಮಾಳ ನಿವಾಸಿ ಸದಾನಂದ ಶೇರಿಗಾರ್ (52), ಹಿರ್ಗಾನ ಶಿವನಗರದ ಶಿಲ್ಪಾ ಸಾಲ್ಯಾನ್ (30) ಎಂಬವರು ಕೊಲೆ ಮಾಡಿ ಸದಾನಂದನನ್ನು ಕಾರೊಳಗೆ ಹಾಕಿ ಸುಟ್ಟು ಹಾಕಿದ್ದಾರೆ. ಬಳಿಕ ಕಾರ್ಕಳ ಪಚ್ಚಲಾಡಿ ಸೂಡ ನಿವಾಸಿಗಳಾದ ಸತೀಶ್ ದೇವಾಡಿಗ (49), ನಿತಿನ್ ದೇವಾಡಿಗ (40) ಕೊಲೆ ಆರೋಪಿಗಳಿಬ್ಬರು ಪರಾರಿಯಾಗಲು ಸಹಕರಿಸಿದ್ದು ಸದ್ಯ ನಾಲ್ವರು ಪೊಲೀಸರ ಅತಿಥಿಯಾಗಿದ್ದಾರೆ ಎನ್ನಲಾಗಿದೆ.

Join Whatsapp
Exit mobile version