Home ಟಾಪ್ ಸುದ್ದಿಗಳು ಗಂಡು ಮಗು ಹುಟ್ಟಬೇಕೆಂಬ ಹರಕೆ: ಫಲಿಸಿದ್ದಕ್ಕೆ ಯುವಕನ ತಲೆಕಡಿದು ಬಲಿಕೊಟ್ಟ ಆಸಾಮಿ

ಗಂಡು ಮಗು ಹುಟ್ಟಬೇಕೆಂಬ ಹರಕೆ: ಫಲಿಸಿದ್ದಕ್ಕೆ ಯುವಕನ ತಲೆಕಡಿದು ಬಲಿಕೊಟ್ಟ ಆಸಾಮಿ

ಭೋಪಾಲ್ : ಗಂಡು ಮಗು ಹುಟ್ಟಬೇಕೆಂದು ಹರಕೆ ಹೊತ್ತಿದ್ದ ವ್ಯಕ್ತಿ , ಆ ಹರಕೆ ಫಲಿಸಿದ್ದಕ್ಕೆ ನೆರೆಮನೆಯ 19 ವರ್ಷದ ಯುವಕನ ತಲೆಕಡಿದು ಬಲಿ ನೀಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ.

ರಾಮ್‌ಲಾಲ್‌ ಎಂಬಾತ ಈ ಭಯಾನಕ ಕೃತ್ಯವೆಸಗಿದ ದುಷ್ಕರ್ಮಿ. ರಾಮ್‌ಲಾಲ್‌ಗೆ ಮೂವರು ಹೆಣ್ಣು ಮಕ್ಕಳಿದ್ದು, ನಾಲ್ಕನೇ ಮಗು ಗಂಡಾಗಿ ಜನಿಸಿದರೆ ಯುವಕನನ್ನು ಬಲಿ ಕೊಡುವುದಾಗಿ ಗ್ರಾಮ ದೇವರಿಗೆ ಹರಕೆ ಹೊತ್ತಿದ್ದ ಎನ್ನಲಾಗಿದೆ. ಇದರಂತೆ ಗಂಡು ಮಗುವಿಗೆ ಆತನ ಪತ್ನಿ ಜನ್ಮ ನೀಡಿದ್ದು, ಇದರ ಖುಷಿಯಲ್ಲಿ ಮಗುವಿನ ಜನನದ ಬಳಿಕ ಆತ ದೇಗುಲದಲ್ಲಿ ಯುವಕನ ತಲೆ ಕಡಿದಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ಆರೋಪಿ ರಾಮ್‌ಲಾಲ್‌ (32) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಈತ 19 ವರ್ಷ ಪ್ರಾಯದ ದಿವ್ಯಾಂಶು ಕೊಲ್ ಎಂಬಾತನನ್ನು ಬಲಿ ನೀಡಿದ್ದು, ಆತ ಮೇಕೆ ಮೇಯಿಸುವಾಗ ಯುವಕನಿಗೆ ಸುಳ್ಳು ಹೇಳಿ ದೇವಸ್ಥಾನದ ಬಳಿ ಕರೆದುಕೊಂಡು ಬಂದು ತಲೆ ಕಡಿದಿದ್ದಾನೆ.

ಮೇಕೆ ಮೇಯಿಸಲು ಹೋದ ದಿವ್ಯಾಂಶು ನಾಪತ್ತೆಯಾದ ಬಗ್ಗೆ ಆತನ ಮನೆಯವರು ದೂರು ನೀಡಿದ್ದು, ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರಿಗೆ ದೇಗುಲದಲ್ಲಿ ದಿವ್ಯಾಂಶು ಶವ ಪತ್ತೆಯಾಗಿದೆ. ನಂತರ ತನಿಖೆ ನಡೆಸಿದಾಗ ರಾಮಲಾಲ್ ಅಸಲಿಯತ್ತು ಬಟಾ ಬಯಲಾಗಿದೆ.

Join Whatsapp
Exit mobile version