ಮುಸ್ಲಿಂ ಯುವಕನಿಗೆ ಥಳಿಸಿ ಉಗುಳು ನೆಕ್ಕುವಂತೆ ಬಲವಂತಪಡಿಸಿದ ಬಿಜೆಪಿ ಕಾರ್ಯಕರ್ತರು

Prasthutha|

ಜಾರ್ಖಂಡ್: ಮುಸ್ಲಿಂ ಯುವಕನಿಗೆ ‘ಜೈಶ್ರೀ ರಾಮ್’ ಘೋಷಣೆ ಕೂಗುವಂತೆ ಆಗ್ರಹಿಸಿದ ಬಿಜೆಪಿ ಕಾರ್ಯಕರ್ತರು ಪೊಲೀಸರ ಸಮ್ಮುಖದಲ್ಲೇ ಮಾರಣಾಂತಿಕವಾಗಿ ಥಳಿಸಿ ಉಗುಳು ನೆಕ್ಕುವಂತೆ ಬಲವಂತಪಡಿಸಿದ ಘಟನೆ ಜಾರ್ಖಂಡ್ದ ಧನ್ಬಾದ್ ಜಿಲ್ಲೆಯಲ್ಲಿ ನಡೆದಿದೆ.

- Advertisement -

ಘಟನೆಯ ವಿಡಿಯೋ ವ್ಯಾಪಕ ವೈರಲ್ ಆಗಿದೆ. ಮುಸ್ಲಿಮ್ ಯುವಕನನ್ನು ಹಿಂಸಿಸುವಾಗ ಬಿಜೆಪಿ ಸಂಸದ ಪಿ.ಎನ್.ಸಿಂಗ್ ಮತ್ತು ಬಿಜೆಪಿ ಎಂಎಲ್ಎ ರಾಜ್ ಸಿನ್ಹಾ ಸ್ಥಳದಲ್ಲಿದ್ದರು ಎನ್ನಲಾಗಿದೆ.

ವೀಡಿಯೋ ವೀಕ್ಷಿಸಿ…

- Advertisement -


ಪಂಜಾಬ್​​ ನಲ್ಲಿ ಪ್ರಧಾನಿ ಮೋದಿಗೆ ಭದ್ರತೆ ಲೋಪವಾಗಿದೆ ಎಂದು ಆರೊಪಿಸಿ ಧನ್ಬಾದ್ ಜಿಲ್ಲೆಯ ಗಾಂಧಿ ಚೌಕದ ಬಳಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಟ್ವೀಟ್ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Join Whatsapp
Exit mobile version