ಸಂವಿಧಾನ ಪರವಾದ ಏಕೈಕ ಪಕ್ಷ ಬಿಜೆಪಿ ಎಂದ ಯದುವೀರ್‌ಗೆ ಟಾಂಗ್ ಕೊಟ್ಟ ನಟ ಚೇತನ್

Prasthutha|

ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಪರವಾದ ಏಕೈಕ ಪಕ್ಷ ಬಿಜೆಪಿ ಎಂದ ಕೊಡಗು-ಮೈಸೂರು ಸಂಸದ ಯದುವೀರ್ ಒಡೆಯರ್‌ ಅವರಿಗೆ ನಟ ಚೇತನ್ ಟಾಂಗ್ ನೀಡಿದ್ದಾರೆ.

- Advertisement -

ಮೈಸೂರಿನಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ್ದ ಸಂಸದರು, ಭಾರತ ಅಭಿವೃದ್ಧಿ ಹೊಂದವುದು ಬಿಜೆಪಿಯಿಂದ ಮಾತ್ರ ಸಾಧ್ಯ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಿಜೆಪಿ ಸೇರ್ಪಡೆಯಾಗಬೇಕು. ಇಂದು ಇಡೀ ವಿಶ್ವವೇ ಭಾರತದತ್ತ ನೋಡುತ್ತಿದೆ ಅಂದ್ರೆ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಕಾರಣ. ಭಾರತವನ್ನು ಆರ್ಥಿಕವಾಗಿ ದೊಡ್ಡ ದೇಶವನ್ನಾಗಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸುತ್ತಿದ್ದು, ಅದಕ್ಕಾಗಿ ಬಿಜೆಪಿಗೆ ನಿಮ್ಮೆಲ್ಲರ ಬೆಂಬಲ ಬೇಕೆಂದು ಯದುವೀರ್ ಒಡೆಯರ್ ಮನವಿ ಮಾಡಿಕೊಂಡರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಟ ಚೇತನ್, ಸಂವಿಧಾನದ ಪರವಾದ ಏಕೈಕ ಪಕ್ಷ ಬಿಜೆಪಿ ಎಂದು ಮೈಸೂರು-ಕೊಡಗು ಸಂಸದ ಯದುವೀರ ಒಡೆಯರ್ ಹೇಳಿದ್ದಾರೆ, ಎಂಥ ಸುಳ್ಳು. ಭ್ರಾತೃತ್ವವು ನಮ್ಮ ಸಂವಿಧಾನದ ಪೀಠಿಕೆಯ ಅವಿಭಾಜ್ಯ ಆದರ್ಶವಾಗಿದೆ. ಮುಸ್ಲಿಂ ವಿರೋಧಿ ಮತ್ತು ಕ್ರಿಶ್ಚಿಯನ್ ವಿರೋಧಿ ನೀತಿಗಳನ್ನು ಸಾಂಸ್ಥಿಕವಾಗಿ ಜಾರಿಗೆ ತರುವ ಹಿಂದುತ್ವವು ಸ್ಪಷ್ಟವಾಗಿ ಭ್ರಾತೃತ್ವಕ್ಕೆ ವಿರುದ್ಧವಾಗಿದೆ. ಯದುವೀರ ಅವರು ನಮ್ಮ ನ್ಯಾಯ ಮಾದರಿಯಾದ ಕೃಷ್ಣರಾಜ ಒಡೆಯರ್ ಕೊಡುಗೆಗಳನ್ನು ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಇದರ ಜೊತೆಯಲ್ಲಿ #fraternity #justice #Wodeyar ಎಂಬ ಹ್ಯಾಶ್‌ ಟ್ಯಾಗ್‌ಗಳನ್ನು ಸಹ ಚೇತನ್ ಬಳಸಿದ್ದಾರೆ.



Join Whatsapp
Exit mobile version