Home Uncategorized ಮಡಿಕೇರಿ: ತುಂಬು ಗರ್ಭಿಣಿಯ ಕುಟುಂಬಕ್ಕೆ ಶುದ್ಧವಾದ ಕುಡಿಯುವ ನೀರು ಒದಗಿಸುವಂತೆ ಆಲೂರು ಗ್ರಾಮ ಪಂಚಾಯಿತಿಗೆ ಕರವೇ...

ಮಡಿಕೇರಿ: ತುಂಬು ಗರ್ಭಿಣಿಯ ಕುಟುಂಬಕ್ಕೆ ಶುದ್ಧವಾದ ಕುಡಿಯುವ ನೀರು ಒದಗಿಸುವಂತೆ ಆಲೂರು ಗ್ರಾಮ ಪಂಚಾಯಿತಿಗೆ ಕರವೇ ಮನವಿ

ಮಡಿಕೇರಿ: ತುಂಬು ಗರ್ಭಿಣಿಯ ಕುಟುಂಬಕ್ಕೆ  ಶುದ್ಧವಾದ ಕುಡಿಯುವ ನೀರು ಒದಗಿಸುವಂತೆ ಆಲೂರು ಗ್ರಾಮ ಪಂಚಾಯಿತಿಗೆ ಕರವೇ ಮನವಿ ಮಾಡಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ  ಶನಿವಾರಸಂತೆ ಹೋಬಳಿ ಸೇರಿದ ಆಲೂರು ಗ್ರಾಮ ಪಂಚಾಯಿತಿಯ ಮೆಣಸ ಗ್ರಾಮದ  ಷಣ್ಮುಖ ಎಂಬುವವರ ಮನೆಗೆ ಪಂಚಾಯಿತಿಯಿಂದ ನೀರು ಬರದೆ 5 ವರ್ಷಗಳು ಕಳೆದಿದೆ ಇವರ ಕುಟುಂಬದಲ್ಲಿ  8ತಿಂಗಳ ತುಂಬು ಗರ್ಭಿಣಿ ಇದ್ದು. ಸರ್ಕಾರದಿಂದ ನೀರಿನ ವ್ಯವಸ್ಥೆಗೆ ಲಕ್ಷಗಟ್ಟಲೆ ಹಣ ಹರಿದು ಬಂದರೂ ಈ ಆಲೂರು ಗ್ರಾಮ ಪಂಚಾಯಿತಿ ಯವರು ಏನು ಮಾಡುತ್ತಿದ್ದಾರೆ ಎಂದು ಕರವೇ ಪ್ರಶ್ನಿಸಿದೆ.

5 ವರ್ಷದಿಂದ ಈ ಕುಟುಂಬದವರು ತುಂಬಾ ದೂರದಿಂದಲೇ ನೀರು ಹೊತ್ತು ತರುತ್ತಿದ್ದು, ಈ ಕುಟುಂಬದವರು  ಆಲೂರು ಪಂಚಾಯಿತಿಯವರಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನ ಕಾಣಲಿಲ್ಲ.   ಹಾಗಾಗಿ ಈ ಕುಟುಂಬದವರು ಕರ್ನಾಟಕ ರಕ್ಷಣಾ ವೇದಿಕೆಯ ಮೊರೆ ಹೋಗಿದ್ದರು. ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಖುದ್ದಾಗಿ ಈ ಕುಟುಂಬವನ್ನು  ಭೇಟಿ ಮಾಡಿ ಪರಿಸ್ಥಿತಿಯನ್ನು ನೋಡಿ ಈ ಕುಟುಂಬದ ಮುಖ್ಯಸ್ಥರಾದ ಷಣ್ಮುಖ ರವರನ್ನು ಆಲೂರು ಗ್ರಾಮ ಪಂಚಾಯಿತಿಗೆ  ಕರೆದುಕೊಂಡು ಹೋಗಿ ಮನವಿ ಪತ್ರವನ್ನು ಕೊಡಲಾಗಿದೆ.

ಈ ಮನವಿಗೆ ಸ್ಪಂದಿಸದೇ ಹೋದರೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಆಲೂರು ಪಂಚಾಯಿತಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಿಳಿಸಿದೆ.

Join Whatsapp
Exit mobile version