Home ಟಾಪ್ ಸುದ್ದಿಗಳು ಶೋಭಾಯಾತ್ರೆಯಲ್ಲಿ ಕಲ್ಲುತೂರಾಟ: ಮುಳಬಾಗಿಲು ತಾಲೂಕಿನಾದ್ಯಂತ 2 ದಿನ ನಿಷೇಧಾಜ್ಞೆ

ಶೋಭಾಯಾತ್ರೆಯಲ್ಲಿ ಕಲ್ಲುತೂರಾಟ: ಮುಳಬಾಗಿಲು ತಾಲೂಕಿನಾದ್ಯಂತ 2 ದಿನ ನಿಷೇಧಾಜ್ಞೆ

ಕೋಲಾರ: ಜಿಲ್ಲೆಯ ಮುಳಬಾಗಿಲು ಪಟ್ಟಣದಲ್ಲಿ‌ ಶ್ರೀರಾಮ ಶೋಭಾಯಾತ್ರೆ ವೇಳೆ ನಡೆದ ಕಲ್ಲುತೂರಾಟ ಘಟನೆಯ ಹಿನ್ನೆಲೆಯಲ್ಲಿ ಮುಳಬಾಗಿಲು ತಾಲೂಕಿನಾದ್ಯಂತ 2 ದಿನಗಳ ಕಾಲ ನಿಷೇಧಾಜ್ಞೆ ವಿಧಿಸಲಾಗಿದೆ.

ಮುಳಬಾಗಿಲು ತಾಲೂಕಿನಾದ್ಯಂತ ಇಂದಿನಿಂದ 48 ಗಂಟೆಗಳ ದಿನಗಳ ಕಾಲ ನಿಷೇಧಾಜ್ಞೆ ವಿಧಿಸಿ ಕೋಲಾರ ಜಿಲ್ಲಾಧಿಕಾರಿ ವೆಂಕಟ್ ರಾಜ ಆದೇಶ ಹೊರಡಿಸಿದ್ದಾರೆ. ರಾಮ ನವಮಿಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಮುಳುಬಾಗಿಲು ಪಟ್ಟಣದಲ್ಲಿ ಅಹಿತಕರ ಘಟನೆಗಳು ನಡೆಯಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 2 ಕೆಎಸ್ ಆರ್ ​ಪಿ ತುಕಡಿ, 6 ಡಿಎಆರ್ ತುಕುಡಿ ನಿಯೋಜನೆ ಮಾಡಲಾಗಿದ್ದು, ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಮೊಕ್ಕಾಂ ಹೂಡಿದ್ದಾರೆ.

Join Whatsapp
Exit mobile version