Home Uncategorized ಕೊಡಗಿನಲ್ಲಿ ನಿರ್ಮಾಣವಾಗಲಿದೆ ಮತ್ತೊಂದು ವೀರ ಯೋಧರ ಮ್ಯೂಸಿಯಂ

ಕೊಡಗಿನಲ್ಲಿ ನಿರ್ಮಾಣವಾಗಲಿದೆ ಮತ್ತೊಂದು ವೀರ ಯೋಧರ ಮ್ಯೂಸಿಯಂ

ಮಡಿಕೇರಿ: ವೀರ ಯೋಧರ ತವರು ಎಂದೇ ಖ್ಯಾತಿ ಗಳಿಸಿರುವ ಕೊಡಗಿಗೆ ಜನರಲ್ ತಿಮ್ಮಯ್ಯ ಮೂಸಿಯಂ ರೀತಿಯಲ್ಲೇ ಮತ್ತೊಂದು ವೀರ ಯೋಧ ಮ್ಯೂಸಿಯಂ ನಿರ್ಮಾಣ ಮಾಡಲು ಕೊಡಗಿನ ಮಾಜಿ ಸೈನಿಕರು ನಿರ್ಧಾರಿಸಿದ್ದಾರೆ.

ಗೋಣಿಕೊಪ್ಪದ ಕಾವೇರಿ ಕಾಲೇಜಿನಲ್ಲಿ 2೦ ವೀರ ಯೋಧರ ಸ್ಮರಣಾರ್ತ ವಾರ್ ಮ್ಯೂಸಿಯಂ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.

ಈಗಾಗೇಲೆ ವಾರ್ ಮ್ಯೂಸಿಯಂ ನಿರ್ಮಾಣಕ್ಕೆ ಕಾವೇರಿ ಕಾಲೇಜಿನ 1.8 ಎಕರೆ ಭೂಮಿಯನ್ನು ನೀಡಲಾಗಿದ್ದು, ಹಿರಿಯ ಸೇನಾಧಿಕಾರಿಗಳು ಮ್ಯೂಸಿಯಂ ನಿರ್ಮಾಣದ ಕಾರ್ಯ ನೋಡಿಕೊಳ್ಳಲಿದ್ದಾರೆ. ಈ ಮ್ಯೂಸಿಯಂ 20 ವೀರ ಯೋಧರ ಮಾಹಿತಿ ಸಾರುವ ಒಂದೊಂದು ಕೊಠಡಿ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.

ಒಂದೊಂದು ಕೊಠಡಿಯನ್ನು ಆಯಾ ವೀರ ಸೇನಾನಿಗಳ ರೆಜಿಮೆಂಟ್ಗೆ ನೀಡಲಾಗುತ್ತದೆ. ಆಯಾ ರೆಜಿಮೆಂಟ್ನ ಅಧಿಕಾರಿಗಳು ಬಂದು ಸೇನಾ ಪದಕ ವಿಜೇತರ ಮಾಹಿತಿ, ಛಾಯಚಿತ್ರ ಹಾಗೂ ಸೇನಾ ಉಪಕರಣಗಳನ್ನು ಮ್ಯೂಸಿಯಂ ನಲ್ಲಿ ಇಡಲಿದ್ದಾರೆ. ಆದರಿಂದ ಈ ಮ್ಯೂಸಿಯಂ ಅತೀ ದೊಡ್ಡ ಮ್ಯೂಸಿಯಂ ಆಗಿ ರೂಪುಗೊಳ್ಳಲಿದೆ. 2024ರ ವರೆಗೆ ಈ ಮ್ಯೂಸಿಯಂ ಅನ್ನು ಮೂರ್ಣಗೊಳ್ಳುವ ಸಾಧ್ಯತೆ ಇದೆ.

Join Whatsapp
Exit mobile version