Home ಟಾಪ್ ಸುದ್ದಿಗಳು ಅಗ್ನಿಪಥ್ ಹಿಂಸಾಚಾರದ ಹಿಂದೆ ಕೃಷಿ ಕಾಯ್ದೆ ವಿರೋಧಿಸಿದವರೇ ಇದ್ದಾರೆ: ಶೋಭಾ ಕರಂದ್ಲಾಜೆ ಆರೋಪ

ಅಗ್ನಿಪಥ್ ಹಿಂಸಾಚಾರದ ಹಿಂದೆ ಕೃಷಿ ಕಾಯ್ದೆ ವಿರೋಧಿಸಿದವರೇ ಇದ್ದಾರೆ: ಶೋಭಾ ಕರಂದ್ಲಾಜೆ ಆರೋಪ

ಉಡುಪಿ: ಅಗ್ನಿಪಥ್‌ ಯೋಜನೆ ವಿರೋಧಿಸಿ ಹಿಂಸಾಚಾರ ನಡೆಯುತ್ತಿರುವುದು ಗಮನಿಸಿದರೆ ಇದರ ಹಿಂದೆ ಕೃಷಿ ಮಸೂದೆ ವಿರುದ್ಧ ಹೋರಾಡಿದವರ ಷಡ್ಯಂತ್ರ ಎದ್ದು ಕಾಣುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಹಿಂಸಾಚಾರ ನಡೆಸಿ ರೈಲು ಸುಟ್ಟು ಹಾಕಿದವರು ಯಾರು ಕೂಡ ಸೈನ್ಯ ಸೇರುವವರಲ್ಲ. ಸೈನ್ಯ ಸೇರದವರು ಮತ್ತು ದೇಶಭಕ್ತಿ ಬಗ್ಗೆ ಮಾತನಾಡದವರು ಈ ಹಿಂಸಾಚಾರ ನಡೆಸುತ್ತಿದ್ದಾರೆ.


ಇದೊಂದು ವ್ಯವಸ್ಥಿತ ಷಡ್ಯಂತ್ರ ಅನ್ನೋದು ಸ್ಪಷ್ಟ .ಈ ಎಲ್ಲಾ ಹಿಂಸಾತ್ಮಕ ಘಟನೆಗಳ ಹಿಂದೆ ಕೃಷಿ ಕಾಯ್ದೆ ವಿರೋಧಿಗಳೇ ಇದ್ದಾರೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

Join Whatsapp
Exit mobile version