Home ಟಾಪ್ ಸುದ್ದಿಗಳು ಮೋದಿ ಕರ್ನಾಟಕಕ್ಕೆ ಬಂದದ್ದೇ ಬೆಂಕಿ ಹಚ್ಚಲು: ಸೊರಕೆ‌ ಹೇಳಿಕೆ

ಮೋದಿ ಕರ್ನಾಟಕಕ್ಕೆ ಬಂದದ್ದೇ ಬೆಂಕಿ ಹಚ್ಚಲು: ಸೊರಕೆ‌ ಹೇಳಿಕೆ

ಮಡಿಕೇರಿ: ಕರ್ನಾಟಕಕ್ಕೆ ಬೆಂಕಿ ಹಚ್ಚಲು ಪ್ರಧಾನಿ ನರೇಂದ್ರ ಮೋದಿ ಬಂದಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿನಯ್ ಕುಮಾರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ವಿದೇಶಗಳ ಜೊತೆಗಿನ ಭಾರತದ ಸಂಬಂಧ ಹಾಳಾಗಿ ಹೋಗಿದೆ. ಅಗ್ನಿಪಥ್ ಯೋಜನೆ ವಿರುದ್ಧವಾಗಿ ಉತ್ತರ ಭಾರತದಲ್ಲಿ ದಂಗೆ ಎದ್ದು ಬೆಂಕಿ ಬಿದ್ದಿದೆ. ಈಗ ಕರ್ನಾಟಕಕ್ಕೆ ಮೋದಿ ಬಂದ್ದದ್ದು ಇಲ್ಲಿಗೆ ಬೆಂಕಿ‌ ಹಚ್ಚಲು. ದೇಶದಲ್ಲಿ ನಡೆಯುತ್ತಿರುವ ಅನಾಹುತಕ್ಕೆಲ್ಲಾ ಕೇಂದ್ರದ ನರೇಂದ್ರ ಮೋದಿ ಸರ್ಕಾರವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ

ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿಗೆ ಅಗತ್ಯದ ಮತ ಇಲ್ಲ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಕಂಡರೆ ಬಿಜೆಪಿಗೆ ಭಯ. ಅದಕ್ಕೆ ಇಡಿ ಬಿಟ್ಟು ಕಾಂಗ್ರೆಸ್ಸನ್ನು ಭಯಪಡಿಸಲು ಯತ್ನಿಸುತ್ತಿದೆ. ಅದಕ್ಕೆಲ್ಲಾ ಕಾಂಗ್ರೆಸ್ ತಲೆಕೆಡಿಸಿಕೊಳ್ಳುವುದಿಲ್ಲ, ಹೆದರುವುದಿಲ್ಲ ಎಂದು ಕೂಡಾ ಸೊರಕೆ ಹೇಳಿದರು.

Join Whatsapp
Exit mobile version