Home ಕರಾವಳಿ ಮಂಗಳೂರು ವಿವಿಯಲ್ಲಿ ABVP ಕಾರ್ಯಕರ್ತರ ಹೈಡ್ರಾಮಾ : ಸಿಂಡಿಕೇಟ್ ಸಭೆಗೆ ನುಗ್ಗಲು ಯತ್ನ

ಮಂಗಳೂರು ವಿವಿಯಲ್ಲಿ ABVP ಕಾರ್ಯಕರ್ತರ ಹೈಡ್ರಾಮಾ : ಸಿಂಡಿಕೇಟ್ ಸಭೆಗೆ ನುಗ್ಗಲು ಯತ್ನ

ಮಂಗಳೂರು ವಿವಿಯಲ್ಲಿ ABVP ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ. ವಿಶ್ವ ವಿದ್ಯಾನಿಲಯದ ಐದನೇ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶ ವಿಳಂಬವಾಗುತ್ತಿದೆ ಎಂದು ಆರೋಪಿಸಿ ABVP ಕಾರ್ಯಕರ್ತರು ಸಿಂಡಿಕೇಟ್ ಸಭೆ ನಡೆಯುತ್ತಿದ್ದ ಸಂದರ್ಭದಲ್ಲೇ ಒಳ ನುಗ್ಗಲು ಯತ್ನಿಸಿದ್ದಾರೆ.

ವಿವಿಯಲ್ಲಿ ಸಿಂಡಿಕೇಟ್ ಸಭೆ ನಡೆಯುತ್ತಿದ್ದ ಸಂದರ್ಭವನ್ನೇ ಬಳಸಿಕೊಂಡ ಸಂಘಟನೆಯ 30ಕ್ಕೂ ಹೆಚ್ಚು ಕಾರ್ಯಕರ್ತರು ಸಭೆ ನಡೆಯುತ್ತಿದ್ದ ಸಭಾಂಗಣಕ್ಕೆ ಅಕ್ರಮವಾಗಿ ಒಳನುಗ್ಗಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆದಿದ್ದಾರೆ.  ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ಮಧ್ಯೆ ವಾಗ್ವಾದವೇರ್ಪಟ್ಟು ನೂಕಾಟ, ತಳ್ಳಾಟ ನಡೆದಿದೆ.

Join Whatsapp
Exit mobile version