Home ಟಾಪ್ ಸುದ್ದಿಗಳು ಮಳೆಯಲ್ಲಿ ಛತ್ರಿ ಹಿಡಿದು ಗಿಡಕ್ಕೆ ನೀರು ಬಿಟ್ಟು ಟ್ರೋಲ್‌ಗೆ ಒಳಗಾದ ಮಧ್ಯಪ್ರದೇಶ ಸಿಎಂ

ಮಳೆಯಲ್ಲಿ ಛತ್ರಿ ಹಿಡಿದು ಗಿಡಕ್ಕೆ ನೀರು ಬಿಟ್ಟು ಟ್ರೋಲ್‌ಗೆ ಒಳಗಾದ ಮಧ್ಯಪ್ರದೇಶ ಸಿಎಂ

ಭೋಪಾಲ್​: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್ ಗಿಡವೊಂದನ್ನು ನೆಟ್ಟು, ಅದಕ್ಕೆ ನೀರು ಹಾಕುತ್ತಿರುವ ಫೋಟೋ ವೈರಲಾಗಿದ್ದು, ಇದೀಗ ವಿಪರೀತ ಟ್ರೋಲ್‌ಗೆ ಒಳಗಾಗಿದ್ದಾರೆ.

​​ ಎರಡು ದೊಡ್ಡ ಮಾರ್ಬಲ್​ ಕಲ್ಲಿನ ಮೇಲೆ ನಿಂತ ಶಿವರಾಜ್​ ಸಿಂಗ್​ ಚೌಹಾಣ್ ಒಂದು ಗಿಡಕ್ಕೆ ನೀರು ಹಾಕುತ್ತಿದ್ದಾರೆ. ಅವರ ಪಕ್ಕದಲ್ಲಿ ನಿಂತ ವ್ಯಕ್ತಿ ಮಳೆಯಲ್ಲಿ ಅವರಿಗೆ ಛತ್ರಿ ಹಿಡಿದಿದ್ದಾರೆ.

ಗಿಡ ನೆಡಲು ದುಬಾರಿ ಬೆಲೆಯ ಮಾರ್ಬಲ್​ ಕಲ್ಲು ಅಗತ್ಯವಿತ್ತಾ? ಮಳೆ ಬರುತ್ತಿರುವಾಗಲೂ ಗಿಡಕ್ಕೆ ನೀರು ಹಾಕಬೇಕಾ? ಎಂಬಿತ್ಯಾದಿ ಪ್ರಶ್ನೆಗಳನ್ನು ನೆಟ್ಟಿಗರು ಕೇಳಿದ್ದಾರೆ.

https://twitter.com/NarendraSaluja/status/1436202858962059265?ref_src=twsrc%5Etfw%7Ctwcamp%5Etweetembed%7Ctwterm%5E1436202858962059265%7Ctwgr%5E%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Ftv9kannada-epaper-tvnkan%2Fviralphotomaleyallichatrihididugidakkenirukelagemaarbalkalluviparitatrolaadhamadhyapradeshasiem-newsid-n314776100%3Flistname%3DtopicsListindex%3D0topicIndex%3D0mode%3Dpwas%3Dpass%3Dwsp

ಈ ಫೋಟೋವನ್ನು ಟ್ವೀಟ್​ ಮಾಡಿದ ಮಧ್ಯಪ್ರದೇಶ ಕಾಂಗ್ರೆಸ್​ ನ ಮಾಧ್ಯಮ ಕೋ ಆರ್ಡಿನೇಟರ್​ ನರೇಂದ್ರ ಸಲುಜಾ, ಇಲ್ಲಿ ಕೆಂಪು ಮಣ್ಣಿನ ವಿಹಂಗಮ ನೋಟವಿದೆ. ಆ ಒದ್ದೆ ಮಣ್ಣಿನ ಮೇಲೆ ರೈತನ ಮಗ ಶಿವರಾಜ್​ ಜೀ ಅವರು ದುಬಾರಿ ಕಲ್ಲುಗಳನ್ನು ಹಾಕಿ ಕೊಡೆ ಹಿಡಿದು ಸಸಿಗೆ ನೀರು ಹಾಕುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.

Join Whatsapp
Exit mobile version