Home ಟಾಪ್ ಸುದ್ದಿಗಳು ಕೋರ್ಟ್ ಆವರಣದಲ್ಲೇ ಯುವಕನ ಗುಂಡಿಕ್ಕಿ ಹತ್ಯೆ

ಕೋರ್ಟ್ ಆವರಣದಲ್ಲೇ ಯುವಕನ ಗುಂಡಿಕ್ಕಿ ಹತ್ಯೆ

ಹೊಸದಿಲ್ಲಿ: ಹೊಸದಿಲ್ಲಿಯ ದ್ವಾರಕ ಕೋರ್ಟ್ ಆವರಣದಲ್ಲಿ ಯುವಕನೊಬ್ಬನನ್ನು ಗುಂಡಿಕ್ಕಿ ಬರ್ಬರ ಹತ್ಯೆಗೈದಿರುವ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಉಪ್ಕಾರ್ ಎಂದು ಗುರುತಿಸಲಾಗಿದೆ.

ಪ್ರಕರಣವೊಂದರ ಆರೋಪಿಯಾಗಿದ್ದ ಉಪ್ಕಾರ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತರಲಾಗಿತ್ತು. ವಕೀಲ ಅರುಣ್‍ಶರ್ಮಾ ಅವರ ಕೊಠಡಿ ಸಂಖ್ಯೆ 444ರಲ್ಲಿ ಆತ ಕುಳಿತಿದ್ದಾಗ ವಕೀಲರ ವೇಷದಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ನ್ಯಾಯಾಲಯದ ಆವರಣದಲ್ಲೇ ಈ ದುರ್ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.

Join Whatsapp
Exit mobile version