Home ಟಾಪ್ ಸುದ್ದಿಗಳು ತಿಂದ ಆಹಾರಕ್ಕೆ ಬಿಲ್ಲು ಪಾವತಿಸಬೇಕಾಗಿಲ್ಲ| ನಾಗರಬಾವಿಯಲ್ಲೊಂದು ಮಾದರಿ ಹೋಟೆಲ್!

ತಿಂದ ಆಹಾರಕ್ಕೆ ಬಿಲ್ಲು ಪಾವತಿಸಬೇಕಾಗಿಲ್ಲ| ನಾಗರಬಾವಿಯಲ್ಲೊಂದು ಮಾದರಿ ಹೋಟೆಲ್!

ಬೆಂಗಳೂರು: ಇಲ್ಲಿನ ನಾಗರಬಾವಿ 11ನೇ ಬ್ಲಾಕ್, 2ನೇ ಹಂತದಲ್ಲಿ ಅನ್ನಪೂರ್ಣೇಶ್ವರಿ ಎಂಬ ಹೋಟೆಲ್ ಆರಂಭವಾಗಿದ್ದು ಹೊಟ್ಟೆ ತುಂಬ ಊಟ ಮಾಡಿ, ಬಿಲ್ ಕೊಡುವ ಕಡ್ಡಾಯವಿಲ್ಲ ಎಂಬುದು ಇಲ್ಲಿ‌ನ ವಿಶೇಷ.

ಸಿಂಗಾಪುರದಲ್ಲಿನ ಈ ಮಾದರಿಯ ಒಂದು ಹೋಟೆಲ್‌ನಿಂದ ಸ್ಪೂರ್ತಿ ಪಡೆದು ಡಿ. ಎಚ್. ಕಿರಣ್ ಗೌಡ ಮತ್ತು ಮಿತ್ರರು ಈ ಹೋಟೆಲ್ ಆರಂಭಿಸಿದ್ದಾರೆ.

ಮಧ್ಯಾಹ್ನದ ಊಟ ನಾಲ್ಕು ಗಂಟೆಯವರೆಗೆ ಇರುತ್ತದೆ. ರಾಗಿ ಮುದ್ದೆ, ಅನ್ನ, ತರಕಾರಿ ಪಲ್ಯ, ಸಾರು, ಮಜ್ಜಿಗೆ, ಒಂದು ಸಿಹಿ ಇಲ್ಲಿನ ಊಟ. ಎಷ್ಟಾದರೂ ಊಟ ಮಾಡಬಹುದು. ಬಿಲ್ ಇಲ್ಲ. ನಿಮಗೆ ಇಷ್ಟವಿದ್ದರೆ ಅಲ್ಲಿ ಇರುವ ಹುಂಡಿಗೆ ಎಷ್ಟು ಬೇಕಾದರೂ ಹಣ ಹಾಕಬಹುದು. ಹಾಕಲೇಬೇಕು ಎಂಬ ಒತ್ತಾಯವಾಗಲಿ, ಕಡ್ಡಾಯವಾಗಲಿ ಇಲ್ಲ.

Join Whatsapp
Exit mobile version