Home ಗಲ್ಫ್ ದುಬೈನಲ್ಲಿ ವಿಶ್ವ ಕನ್ನಡ ಹಬ್ಬ: ಪೂರ್ವಭಾವಿ ಸಿದ್ಧತೆ ಆರಂಭ

ದುಬೈನಲ್ಲಿ ವಿಶ್ವ ಕನ್ನಡ ಹಬ್ಬ: ಪೂರ್ವಭಾವಿ ಸಿದ್ಧತೆ ಆರಂಭ

ಬೆಂಗಳೂರು: ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಯುನೈಟೆಡ್ ಅರಬ್ ಎಮಿರೇಟ್ಸ್ ದುಬೈನಲ್ಲಿ ‘ವಿಶ್ವ ಕನ್ನಡ ಹಬ್ಬ’ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿ ಸಮಾರಂಭವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಪೂರ್ವಭಾವಿ ಸಿದ್ಧತೆಯನ್ನು ಮಾಡಲು ಸಂಸ್ಥೆಯ ಮುಖ್ಯಸ್ಥರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಪ್ರಯಾಣ ಬೆಳೆಸಿದರು.

ಅವರಿಗೆ ಶುಭ ಕೋರಲು ಅಧ್ಯಕ್ಷರಾದ ಡಾ. ಟಿ. ಶಿವಕುಮಾರ್ ನಾಗರ ನವಿಲೆ, ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ರವಿಸಂತು, ಕಲಾ ನವೀನ್ ಫಿಲ್ಮ್ ಅಕಾಡೆಮಿಯ CEO ನವೀನ್ ಕುಮಾರ್, ಲಲಿತಕಲಾ ತಂಡದ ಅಧ್ಯಕ್ಷರಾದ ಟಿ. ಮಹೇಶ್, ಕಾರ್ಯದರ್ಶಿಯಾದ ಪುಷ್ಪ ಹಾಗೂ ಕಲಾವಿದರಾದ ಭರತ್ ಜಾಕ್ ಮತ್ತಿತರರು ಉಪಸ್ಥಿತರಿದ್ದರು.


ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿ ವಿಶ್ವ ಮಟ್ಟದಲ್ಲಿ ಕನ್ನಡವನ್ನು ಬೆಳೆಸಿ ಮೂಲ ಕನ್ನಡಿಗರು ಹಾಗೂ ಆನಿವಾಸಿ ಕನ್ನಡಿಗರ ಬೆಸುಗೆಯನ್ನು ಬೆಸೆಯಲು ಮುಂದಾಗಿರುವ ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಉದ್ಯಮಿ ಪ್ರಸಾದ್ ಶೆಟ್ಟಿಯವರು ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಂಡಿರುತ್ತಾರೆ

Join Whatsapp
Exit mobile version