Home ಟಾಪ್ ಸುದ್ದಿಗಳು ಪ್ರಜ್ವಲ್‌ ರೇವಣ್ಣಗೂ ನಮಗೂ ಸಂಬಂಧವಿಲ್ಲ: ಜಿ.ಟಿ. ದೇವೇಗೌಡ

ಪ್ರಜ್ವಲ್‌ ರೇವಣ್ಣಗೂ ನಮಗೂ ಸಂಬಂಧವಿಲ್ಲ: ಜಿ.ಟಿ. ದೇವೇಗೌಡ

ಮೈಸೂರು: ಪ್ರಜ್ವಲ್‌ ರೇವಣ್ಣಗೂ ನಮಗೂ ಸಂಬಂಧ ಇಲ್ಲ ಎಂದು ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್‌ ರೇವಣ್ಣ ಅವರನ್ನು ಈಗಾಗಲೇ ಪಕ್ಷದಿಂದ ಉಚ್ಚಾಟಿಸಲಾಗಿದೆ. ಈಗ ಪ್ರಜ್ವಲ್‌ಗೂ ನಮಗೂ ಸಂಬಂಧವಿಲ್ಲ. ನನಗೆ ಸಂಬಂಧವಿಲ್ಲದ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದಿದ್ದಾರೆ.

ಮಾಜಿ ಶಾಸಕ ಸಾ.ರಾ. ಮಹೇಶ್‌ ಕೂಡ ಈ ಸಂದರ್ಭದಲ್ಲಿ ಮಾತನಾಡಿ, ಹೆಚ್‌.ಡಿ.ದೇವೇಗೌಡರು ಈಗಾಗಲೇ ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ. ಅದರಂತೆ ಪ್ರಜ್ವಲ್‌ ಈಗಾಗಲೇ ಬರಬೇಕಿತ್ತು. ಇದೀಗ ಬರುವುದಾಗಿ ಹೇಳಿದ್ದಾರೆ. ಈ ನೆಲದಲ್ಲಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಅವರು ಬಂದ ನಂತರ ಸತ್ಯಾಸತ್ಯತೆ ಗೊತ್ತಾಗಲಿದೆ. ನಾನು ಈಗಾಗಲೇ ತಿಳಿಸಿರುವಂತೆ, ಎಚ್‌.ಡಿ.ರೇವಣ್ಣ ಬಂಧನ ವಿಚಾರದಲ್ಲಿ ಷಡ್ಯಂತ್ರ ನಡೆದಿದೆ. ಆದರೆ ಪ್ರಜ್ವಲ್‌ ವಿಚಾರದಲ್ಲಿ ಮಾತನಾಡಲು ಈಗಲೂ ನನಗೆ ಮನಸ್ಸು ಒಪ್ಪುತ್ತಿಲ್ಲ ಎಂದಿದ್ದಾರೆ.

Join Whatsapp
Exit mobile version