Home ಟಾಪ್ ಸುದ್ದಿಗಳು ಗುಜರಾತ್ ಹತ್ಯಾಕಾಂಡ ಪುನರಾವರ್ತಿಸುವುದಾಗಿ ಬಹಿರಂಗ ಬೆದರಿಕೆ ಹಾಕಿದ ವಿಎಚ್ ಪಿ

ಗುಜರಾತ್ ಹತ್ಯಾಕಾಂಡ ಪುನರಾವರ್ತಿಸುವುದಾಗಿ ಬಹಿರಂಗ ಬೆದರಿಕೆ ಹಾಕಿದ ವಿಎಚ್ ಪಿ

ಮನೇಸರ್ (ಹರಿಯಾಣ): ಉದಯಪುರದಲ್ಲಿ ಕನ್ಹಯ್ಯಾ ಲಾಲ್ ಹತ್ಯೆಗೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್, ಮುಸ್ಲಿಮರನ್ನು ಬಹಿಷ್ಕರಿಸುವಂತೆ ಮತ್ತು ಅಗತ್ಯವಿದ್ದರೆ ಅವರ ವಿರುದ್ಧ ಆಯುಧಗಳನ್ನು ಎತ್ತುವಂತೆ ಕರೆನೀಡಿದೆ.

ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯಾ ಲಾಲ್ ಅವರನ್ನು ಭೀಕರವಾಗಿ ಹತ್ಯೆ ಮಾಡಿರುವುದನ್ನು ಪ್ರತಿಭಟಿಸಿ ಬಜರಂಗದಳ, ವಿಶ್ವ ಹಿಂದೂ ಪರಿಷತ್ ಮತ್ತು ಇತರ ಸಂಘಟನೆಗಳ ಸದಸ್ಯರು ಸೇರಿದಂತೆ 300 ಕ್ಕೂ ಹೆಚ್ಚು ಹಿಂದುತ್ವ ಕಾರ್ಯಕರ್ತರು ‘ಮಹಾಪಂಚಾಯತ್’ ನಡೆಸಿದ್ದರು. ಈ ಕಾರ್ಯಕ್ರಮದಲ್ಲಿ ಮುಸ್ಲಿಮರನ್ನು ಬಹಿಷ್ಕರಿಸುವಂತೆ ಮತ್ತು ಅಗತ್ಯವಿದ್ದರೆ ಅವರ ವಿರುದ್ಧ ಆಯುಧಗಳನ್ನು ಎತ್ತಿಕೊಳ್ಳುವ ಕರೆಗಳು ಕೇಳಿಬಂದಿವೆ.

ಇದಕ್ಕೂ ಮೊದಲು ಟ್ವಿಟರ್ ನಲ್ಲಿ ‘ಮುಸ್ಲಿಮರನ್ನು ಬಹಿಷ್ಕರಿಸಿ’ #TotalBoycott ವೈರಲ್ ಆಗಿತ್ತು. ಈ ಕರೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ ಮತ್ತು ಬಿ ಯ ಬಹಿರಂಗ ಉಲ್ಲಂಘನೆಯಾಗಿದ್ದರೂ, ಸಾಮಾಜಿಕ ಮಾಧ್ಯಮಗಳಲ್ಲಿ ಹ್ಯಾಶ್ ಟ್ಯಾಗ್ ಅನ್ನು ನಿರ್ಭೀತಿಯಿಂದ ಟ್ರೆಂಡ್ ಮಾಡಲು ಮೋದಿ ಸರ್ಕಾರವು ಅವರಿಗೆ ನೈತಿಕ ಬೆಂಬಲವನ್ನು ನೀಡುತ್ತಿದೆ ಎಂದು ಆರೋಪಿಸಲಾಗಿದೆ.

Join Whatsapp
Exit mobile version