Home ಟಾಪ್ ಸುದ್ದಿಗಳು ಒಡಿಶಾದ ಹಿರಿಯ ಬಿಜೆಪಿ ನಾಯಕ ಬಿಷ್ಣು ಚರಣ್ ಸೇಥಿ ನಿಧನ

ಒಡಿಶಾದ ಹಿರಿಯ ಬಿಜೆಪಿ ನಾಯಕ ಬಿಷ್ಣು ಚರಣ್ ಸೇಥಿ ನಿಧನ

ಭುವನೇಶ್ವರ: ಒಡಿಶಾದ ಹಿರಿಯ ಬಿಜೆಪಿ ನಾಯಕ, ವಿಧಾನಸಭೆಯ ಉಪನಾಯಕ ಬಿಷ್ಣು ಚರಣ್ ಸೇಥಿ(61) ನಿಧನರಾದರು.

ತೀವ್ರ ಶ್ವಾಸಕೋಶದ ತೊಂದರೆ ಮತ್ತು ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ಆಗಸ್ಟ್ 16 ರಂದು ಭುವನೇಶ್ವರದ ಏಮ್ಸ್ ಗೆ ದಾಖಲಿಸಲಾಗಿತ್ತು. ಮೂತ್ರಪಿಂಡ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು  ತೀವ್ರ ಹೃದಯ ವೈಫಲ್ಯದಿಂದಾಗಿ ಮೃತಪಟ್ಟಿದ್ದಾರೆ ಎಂದು ಏಮ್ಸ್-ಭುವನೇಶ್ವರ ಅಧೀಕ್ಷಕ ಎಸ್ ಎನ್ ಮೊಹಂತ್ ಸುದ್ದಿಗಾರರಿಗೆ ತಿಳಿಸಿದರು.

ಭದ್ರಕ್ ಜಿಲ್ಲೆಯಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸೇಥಿ ಅವರು ಧಾಮ್ ನಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾಗಿದ್ದರು.

ಸೇಥಿ ಅವರು ಪತ್ನಿಯನ್ನು ಅಗಲಿದ್ದಾರೆ. ರಾಜ್ಯಪಾಲ ಗಣೇಶಿ ಲಾಲ್ ಮತ್ತು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೇರಿದಂತೆ ಹಲವು ನಾಯಕರು ಸೇಥಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

2019 ರ ಚುನಾವಣೆಯ ನಂತರ ವಿಧಾನಸಭೆಗೆ ಆಯ್ಕೆಯಾದ ತನ್ನ 23 ಶಾಸಕರಲ್ಲಿ ಇಬ್ಬರನ್ನು ಬಿಜೆಪಿ ಕಳೆದುಕೊಂಡಿದೆ. ಇದಕ್ಕೂ ಮೊದಲು, ಬಾಲಸೋರ್ ಶಾಸಕ ಮದನ್ಮೋಹನ್ ದತ್ತಾ ಅವರು 2020 ರಲ್ಲಿ ನಿಧನರಾಗಿದ್ದರು.

Join Whatsapp
Exit mobile version