ಉತ್ತರ ಪ್ರದೇಶ: ಮುಖ್ಯಮಂತ್ರಿ ಆದಿತ್ಯನಾಥ್‌ ಗೆ ಫೇಸ್‌ಬುಕ್ ಪೋಸ್ಟ್ ಮೂಲಕ ಕೊಲೆ ಬೆದರಿಕೆ

Prasthutha|

ಲಕ್ನೋ: ಮುಖ್ಯಮಂತ್ರಿ ಆದಿತ್ಯನಾಥ್ ಅವರ ಶಿರಚ್ಛೇದಗೈಯ್ಯುವುದಾಗಿ ಫೇಸ್‌ಬುಕ್‌ನಲ್ಲಿ ಬೆದರಿಕೆ ಹಾಕಲಾಗಿದ್ದು, ಆತ್ಮಪ್ರಕಾಶ್  ಪಂಡಿತ್ ಎಂಬ ಖಾತೆಯಿಂದ ಈ ಸಂದೇಶ ಬಂದಿದೆ.

- Advertisement -

ಮೊರಾದಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಬೆದರಿಕೆ ಹಾಕಿದಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಪ್ರಕರಣದ ತನಿಖೆಯನ್ನು ಸೈಬರ್ ಸೆಲ್ ನಡೆಸುತ್ತಿದೆ. ತನ್ನ ಖಾತೆಯನ್ನು ಯಾರೋ ದುರ್ಬಳಕೆ ಮಾಡಿದ್ದಾರೆ ಎಂದು ಆತ್ಮಪ್ರಕಾಶ್ ತಿಳಿಸಿದ್ದಾನೆಂದು ಪೊಲೀಸ್ ವರಿಷ್ಠಾಧಿಕಾರಿ ಅಖಿಲೇಶ್ ಬದೌರಿಯ ತಿಳಿಸಿದ್ದಾರೆ.

Join Whatsapp
Exit mobile version