Home ಟಾಪ್ ಸುದ್ದಿಗಳು ಉಪ್ಪಿನಂಗಡಿ: ಧಿಡೀರ್ ಅನಾರೋಗ್ಯಕ್ಕೀಡಾಗಿ ಪಿಯುಸಿ ವಿದ್ಯಾರ್ಥಿ ನಿಧನ

ಉಪ್ಪಿನಂಗಡಿ: ಧಿಡೀರ್ ಅನಾರೋಗ್ಯಕ್ಕೀಡಾಗಿ ಪಿಯುಸಿ ವಿದ್ಯಾರ್ಥಿ ನಿಧನ

ಉಪ್ಪಿನಂಗಡಿ: ಧಿಡೀರ್ ಅನಾರೋಗ್ಯಕ್ಕೀಡಾದ ಕಾಲೇಜು ವಿದ್ಯಾರ್ಥಿಯೋರ್ವ ಮೃತಪಟ್ಟಿರುವ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.


ಮೃತರನ್ನು ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಮುಹಮ್ಮದ್ ಸಿರಾಜುದ್ದೀನ್ (17) ಎಂದು ಗುರುತಿಸಲಾಗಿದೆ.


ಕೊಯಿಲದ ಗಂಡಿಬಾಗಿಲು ನಿವಾಸಿಯಾಗಿರುವ ಸಿರಾಜುದ್ದೀನ್ ಕಾಲೇಜಿಗೆಂದು ಬೆಳಿಗ್ಗೆ ತನ್ನ ಗೆಳೆಯರೊಂದಿಗೆ ಹೊರಟು ಬಂದಿದ್ದು, ಕಾಲೇಜಿನ ದಾರಿ ಮಧ್ಯೆ ಬಿ.ಪಿ. ಲೋ ಸಮಸ್ಯೆಯಿಂದ ತಲೆ ತಿರುಗಿ ಬಿದ್ದಿದ್ದ ಎನ್ನಲಾಗಿದೆ. ಕೂಡಲೇ ಈತನ ಜೊತೆಗಿದ್ದ ಸ್ನೇಹಿತರು ಸಿರಾಜುದ್ದೀನ್ನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

Join Whatsapp
Exit mobile version