Home ಕರಾವಳಿ  ಉಪ್ಪಿನಂಗಡಿ: KSRTC ಬಸ್ ಢಿಕ್ಕಿ| ಕುದುರೆ ಹಾಗೂ ಸವಾರ ಗಂಭೀರ

 ಉಪ್ಪಿನಂಗಡಿ: KSRTC ಬಸ್ ಢಿಕ್ಕಿ| ಕುದುರೆ ಹಾಗೂ ಸವಾರ ಗಂಭೀರ

ಉಪ್ಪಿನಂಗಡಿ: KSRTC ಬಸ್ ಡಿಕ್ಕಿ ಹೊಡೆದ ಪರಿಣಾಮ ಕುದುರೆ ಹಾಗೂ ಕುದುರೆ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಉಪ್ಪಿನಂಗಡಿಯ ಪೆದಮಲೆ ಎಂಬಲ್ಲಿ ಕುದುರೆಯೊಂದಕ್ಕೆ KSRTC ಬಸ್ ಡಿಕ್ಕಿ ಹೊಡೆದಿದ್ದು,  ಪರಿಣಾಮ ಕುದುರೆ ಹಾಗೂ ಕುದುರೆ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ.

ಸಚಿನ್ ಪೆಲಪ್ಪಾರ್ ಎಂಬವರು ಕುದುರೆ ಸವಾರಿ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಈ ವೇಳೆ KSRTC ಬಸ್ ಡಿಕ್ಕಿ ಹೊಡೆದಿದ್ದು, ಗಾಯಾಳು ಸಚಿನ್ ಅನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

 ಕುದುರೆ ಕೂಡಾ ಗಂಭೀರ ಗಾಯಗೊಂಡಿದ್ದು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದೆ ಎಂದು ತಿಳಿದುಬಂದಿದೆ.

Join Whatsapp
Exit mobile version