Home ಟಾಪ್ ಸುದ್ದಿಗಳು ಬಾಲಕಿಗೆ ಹಾವು ಕಡಿತ: ಮಾಂತ್ರಿಕನ ಮಾತು ಕೇಳಿ ಸಗಣಿಯಲ್ಲಿ ಹೂತಿಟ್ಟು ಹುಚ್ಚಾಟ!

ಬಾಲಕಿಗೆ ಹಾವು ಕಡಿತ: ಮಾಂತ್ರಿಕನ ಮಾತು ಕೇಳಿ ಸಗಣಿಯಲ್ಲಿ ಹೂತಿಟ್ಟು ಹುಚ್ಚಾಟ!

ಬಾಲಕಿ ಮೃತ್ಯು

ಷಹಜಹಾನ್‌ ಪುರ: ಹಾವು ಕಚ್ಚಿದ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಮಾಂತ್ರಿಕನ ಮಾತು ಕೇಳಿ
ಮೂಢನಂಬಿಕೆಗೆ ಪ್ರಾಣವೊಂದು ಹಾರಿ ಹೋಗಿದೆ.

ಈ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಶಹಜಹಾನ್​ ಪುರ ಜಿಲ್ಲೆಯ ರಾವತ್​ ಪುರ ಗ್ರಾಮದಲ್ಲಿ 3 ದಿನಗಳ ಹಿಂದೆ ಘಟನೆ ನಡೆದಿದೆ.

ಬಾಲಕಿಗೆ ಹಾವು ಕಚ್ಚಿದೆ. ಈ ವೇಳೆ, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಊರ ಮಾಂತ್ರಿಕನ ಬಳಿಗೆ ಕರೆದೊಯ್ದಿದ್ದಾರೆ. ಮಗು ವಿಷದಿಂದ ಸಾವನ್ನಪ್ಪಿದೆ. ಮಾಂತ್ರಿಕ ಬಾಲಕಿ ಬದುಕಿದ್ದಾಳೆ ಎಂದು ಹೇಳಿ ದೇಹವನ್ನು ಸಗಣಿ, ಬೇವಿನ ಸೊಪ್ಪಿನಿಂದ ಮುಚ್ಚಿಸಿದ್ದಾನೆ. ಆದರೂ ಮಗು ಬದುಕಿಲ್ಲ. ಬಳಿಕ ಅಂತ್ಯಕ್ರಿಯೆ ನಡೆಸಲಾಗಿದೆ.

Join Whatsapp
Exit mobile version