Home ಟಾಪ್ ಸುದ್ದಿಗಳು ವಳಚ್ಚಿಲ್ ಶ್ರೀನಿವಾಸ ಕಾಲೇಜಿನಲ್ಲಿ ಅನಧಿಕೃತ ಕ್ಯಾಂಟೀನ್ ಆರೋಪ: ಅಡ್ಯಾರ್ ಗ್ರಾ.ಪಂ. ನಿಂದ ನೋಟಿಸ್ ಜಾರಿ

ವಳಚ್ಚಿಲ್ ಶ್ರೀನಿವಾಸ ಕಾಲೇಜಿನಲ್ಲಿ ಅನಧಿಕೃತ ಕ್ಯಾಂಟೀನ್ ಆರೋಪ: ಅಡ್ಯಾರ್ ಗ್ರಾ.ಪಂ. ನಿಂದ ನೋಟಿಸ್ ಜಾರಿ

ಮಂಗಳೂರು: ವಳಚ್ಚಿಲ್ ಶ್ರೀನಿವಾಸ ಕಾಲೇಜಿನಲ್ಲಿ ಅನಧಿಕೃತವಾಗಿ ಕ್ಯಾಂಟೀನ್ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಅಡ್ಯಾರ್ ಗ್ರಾಪಂ ಆಡಳಿತವು ಕಾಲೇಜಿನ ಅಧ್ಯಕ್ಷರಿಗೆ ನೋಟಿಸ್ ಜಾರಿಗೊಳಿಸಿದೆ.


ಅಡ್ಯಾರ್ ಗ್ರಾಪಂನಿಂದ ಯಾವುದೇ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಕ್ಯಾಂಟೀನ್ ನಡೆಸಲಾಗುತ್ತಿದೆ. ಈ ಕ್ಯಾಂಟೀನ್ ನ ಲ್ಲಿ ಆಹಾರ ಸೇವಿಸಿದ ಹಲವಾರು ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಬಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ವರದಿ ನೀಡಿದ್ದಾರೆ.

ಜು.2ರಂದು ನಡೆದ ಸಾಮಾನ್ಯ ಸಭೆಯಲ್ಲಿ ಕ್ಯಾಂಟೀನ್ ಬಂದ್ ಮಾಡಿಸಲು ತೀರ್ಮಾನಿಸಲಾಗಿದೆ. ಅದರಂತೆ ಕ್ಯಾಂಟೀನ್ ಬಂದ್ ಮಾಡುವಂತೆ ಸೂಚಿಸಲಾಗಿದೆ. ಮೂರು ದಿನದೊಳಗೆ ಬಂದ್ ಮಾಡಿಸದಿದ್ದಲ್ಲಿ ಗ್ರಾಪಂ ಆಡಳಿತವು ಕ್ಯಾಂಟೀನ್ ಬಂದ್ ಮಾಡಲಿದೆ ಎಂದು ಗ್ರಾಪಂ ಅಧ್ಯಕ್ಷ ಜಲೀಲ್ ತಿಳಿಸಿದ್ದಾರೆ.

Join Whatsapp
Exit mobile version