Home ಟಾಪ್ ಸುದ್ದಿಗಳು ಉಳ್ಳಾಲ ಖಾಝಿ ನಿಧನ; ಮುಸ್ಲಿಂ ಸಮುದಾಯಕ್ಕೆ ತುಂಬಲಾರದ ನಷ್ಟ: ರಿಯಾಝ್ ಫರಂಗಿಪೇಟೆ

ಉಳ್ಳಾಲ ಖಾಝಿ ನಿಧನ; ಮುಸ್ಲಿಂ ಸಮುದಾಯಕ್ಕೆ ತುಂಬಲಾರದ ನಷ್ಟ: ರಿಯಾಝ್ ಫರಂಗಿಪೇಟೆ

ಮಂಗಳೂರು: ಉಳ್ಳಾಲ ಖಾಝಿ ಫಝಲ್ ಕೋಯಮ್ಮ ಕೂರ ತಂಙಲ್ ನಮ್ಮೆಲ್ಲರನ್ನು ಅಗಲಿರುತ್ತಾರೆ ಎಂಬ ಆಘಾತಕಾರಿ ಸುದ್ದಿಯು ಮುಸ್ಲಿಂ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಎಸ್ ಡಿಪಿಐ ನಾಯಕ ರಿಯಾಝ್ ಫರಂಗಿಪೇಟೆ ಹೇಳಿದ್ದಾರೆ.


ಈ ಬಗ್ಗೆ ಎಕ್ಸ್ ಮಾಡಿರುವ ಅವರು, ಬಹುಮಾನ್ಯರಾದ ಸುನ್ನಿ ನೇತಾರ ತಾಜುಲ್ ಉಲಮಾಬಿರುದಾಂಕಿತ ಉಳ್ಳಾಲ ತಂಙಳ್ ರವರ ಸುಪುತ್ರ ಸುನ್ನಿ ಸಮೂಹದ ಆಶಾದೀಪ ಸೆಯ್ಯದ್ ಕುಟುಂಬ ಪರಂಪರೆಯ ಕುಡಿ ಸೆಯ್ಯದ್ ಫಝಲ್ ಕೋಯಮ್ಮ ಕೂರತ್ ತಂಙಳ್ ರವರು ನಮ್ಮೆಲ್ಲರನ್ನು ಅಗಲಿರುತ್ತಾರೆ ಎಂಬ ಆಘಾತಕಾರಿ ಸುದ್ದಿಯು ಮುಸ್ಲಿಂ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿರುತ್ತದೆ.

ಅಲ್ಲಾಹನು ಬಹುಮಾನವರ್ಯರ ಪರಲೋಕ ಯಾತ್ರೆಯಲ್ಲಿ ಅವರ ಸಕಲ ಸತ್ಕರ್ಮಗಳನ್ನು ಸ್ವೀಕರಿಸಿ ಸ್ವರ್ಗೋದ್ಯಾನದಲ್ಲಿ ಉನ್ನತ ಸ್ಥಾನ ಮಾನವನ್ನು ನೀಡಿ ಗೌರವಿಸಲಿ ಹಾಗೂ ಅವರ ಶಿಷ್ಯ ವೃಂದಕ್ಕೆ ಮತ್ತು ಬಂಧು ಬಳಗಕ್ಕೆ ನೋವನ್ನು ಸಹಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಸೃಷ್ಟಿಕರ್ತನಲ್ಲಿ ಪ್ರಾರ್ಥಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

Join Whatsapp
Exit mobile version