ದರ್ಗಾದಿಂದ ವಾಪಾಸ್ ಆಗುತ್ತಿದ್ದ ವೇಳೆ ಅಪಘಾತ: ಇಬ್ಬರು ಮೃತ್ಯು

Prasthutha|

ಕಲಬುರಗಿ: ಕಾರು ಹಾಗೂ ಕ್ರೂಸರ್ ನಡುವೆ ಅಪಘಾತವಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿರುವ ಘಟನೆ ಕಮಲಾಪುರ ತಾಲೂಕಿನ ಭೀಮನಾಳ ಕ್ರಾಸ್ ಬಳಿ ನಡೆದಿದೆ.

- Advertisement -


ತೆಲಂಗಾಣದ ಹನುಮಕೊಂಡ ನಗರದ ನಿವಾಸಿ ಮುಹಮ್ಮದ್ ಅಬ್ದುಲ್ ಮಜೀದ್ ಸಿದ್ದಿಕಿ (71) ಹಾಗೂ ಹೈದ್ರಾಬಾದ್ ಬಾಲಾಜಿನಗರದ ಸಾದಿಯಾ ಉನ್ನಿಸಾ ಬೇಗಂ(55) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಗಾಯಾಳುಗಳಾದ ಹುಸೇನ್, ಫರ್ಹತ್ ಸುಲ್ತಾನಾ, ಇಂತಿಮಾ ಸುಲ್ತಾನ ಮೂವರನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.


ಮೃತರು ಕ್ರೂಸರ್ ವಾಹನದಲ್ಲಿ ಕಲಬುರಗಿಯ ಖ್ವಾಝಾ ಬಂದೇ ನವಾಝ್ ದರ್ಗಾದ ದರ್ಶನ ಮಾಡಿಕೊಂಡು ಬೀದರ್ ಕಡೆಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದಿದೆ.
ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version