ಸಂಘಪರಿವಾರ ಕಾರ್ಯಕರ್ತನಿಂದ ಮುಸ್ಲಿಮ್ ಮುಖಂಡನಿಗೆ ಚೂರಿ ಇರಿತ: ಸಮಿವುಲ್ಲಾ ಸ್ಥಿತಿ ಗಂಭೀರ !

Prasthutha|

ಚಿತ್ರದುರ್ಗ: ಸಂಘಪರಿವಾರ ಕಾರ್ಯಕರ್ತನೋರ್ವ ಮುಸ್ಲಿಮ್ ಮುಖಂಡನಿಗೆ ಚೂರಿ ಇರಿದ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಆಲೂರು ಗ್ರಾಮದ ಕೃಷ್ಣ ರಾಜಪುರ ರಸ್ತೆಯಲ್ಲಿ ನಡೆದಿದೆ.

- Advertisement -


ಸಮಿವುಲ್ಲಾ (38) ಚೂರಿ ಇರಿತಕ್ಕೊಳಗಾದ ಮುಸ್ಲಿಮ್ ಮುಖಂಡ ಎಂದು ಗುರುತಿಸಲಾಗಿದೆ.


ನೂತನ್ ಸಂಘಪರಿವಾರದ ಕಾರ್ಯಕರ್ತನಾಗಿದ್ದನು ಈತ ಉದ್ದೇಶಪೂರ್ವಕವಾಗಿ ಸಮೀವುಲ್ಲಾ ಮೇಲೆ ದಾಳಿ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.

- Advertisement -


ನಿನ್ನೆ ಸಂಜೆ ನಮಾಜ್ ಮುಗಿಸಿ ಬರುವಾಗ ಚಾಕು ಹಾಕಿದ್ದಾರೆ ಎಂದು ಸಮೀವುಲ್ಲಾ ಸಹೋದರ ಕಾಶೀಂಸಾಬ್ ಹೇಳಿಕೆ ನೀಡಿದ್ದಾರೆ. ಸಮೀವುಲ್ಲಾ ಮುಸ್ಲಿಂ ಸಮುದಾಯದ ಮುಖಂಡರಾಗಿದ್ದರು. ಆಲೂರಿನ ಯುವಕ ನೂತನ್ 3-4 ಬಾರಿ ಚಾಕು ಇರಿದಿದ್ದಾನೆ. ಸಮೀವುಲ್ಲಾ, ನೂತನ್ ನಡುವೆ ಯಾವುದೇ ದ್ವೇಷ ಇರಲಿಲ್ಲ. ಉದ್ದೇಶಪೂರ್ವಕವಾಗಿ ಸಮೀವುಲ್ಲಾ ಮೇಲೆ ದಾಳಿ ನಡೆಸಿದ್ದಾನೆ ಎಂದು ಹೇಳಿದ್ದಾರೆ.

ವೈಯಕ್ತಿಕ ಮತ್ತು ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ನಡೆದ ಘಟನೆಯಾಗಿದ್ದು, ಆರೋಪಿಯನ್ನು ನಾವು ಈಗಾಗಲೇ ಬಂಧಿಸಿದ್ದೇವೆ. ಪ್ರಕರಣಕ್ಕೆ ಬೇರೆ ಆಯಾಮವಿದೆಯೇ ಎಂದು ತನಿಖೆ ನಡೆಸುತ್ತಿದ್ದೇವೆ ಎಂದು ಎಸ್ಪಿ ಹೇಳಿದ್ದಾರೆ.

Join Whatsapp
Exit mobile version