Home ಟಾಪ್ ಸುದ್ದಿಗಳು ಈಜಲು ಹೋದ ಇಬ್ಬರು ಬೌದ್ಧ ಸನ್ಯಾಸಿಗಳು ಕಾವೇರಿ ಪಾಲು

ಈಜಲು ಹೋದ ಇಬ್ಬರು ಬೌದ್ಧ ಸನ್ಯಾಸಿಗಳು ಕಾವೇರಿ ಪಾಲು

ಮೈಸೂರು: ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಬೌದ್ಧ ಸನ್ಯಾಸಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಬೈಲುಕುಪ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೌದ್ಧ ಸನ್ಯಾಸಿಗಳಾದ ಪೆನ್ನಲೆ ತೋ (18) ಹಾಗು ಫೆಮಸೀರಮಗ್ (18) ಮೃತಪಟ್ಟವರು.

ಪೆನ್ನಲೆ ತೋ ಹಾಗೂ ಫೆಮಸೀರಮಗ್ ಮೃತದೇಹಗಳನ್ನು ಕಾವೇರಿ ನದಿಯಿಂದ ಹೊರ ತೆಗೆದು ಕುಶಾಲನಗರದ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ವಾರಸುದಾರರಿಗೆ ‌ಹಸ್ತಾಂತರಿಸಲಾಗಿದೆ.

ಲಾಮಾ ಕ್ಯಾಂಪಿನ ಸೆರಾಜೆ ಮುಖ್ಯಸ್ಥ ಲೋಪ್ ಸಾಂಗ್ ಹೋಜರ್ ಅವರು ಬೈಲುಕುಪ್ಪೆ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Join Whatsapp
Exit mobile version