Home ಟಾಪ್ ಸುದ್ದಿಗಳು ಸೇನಾ ಹೆಲಿಕಾಪ್ಟರ್ ದುರಂತ: ಬಿಜೆಪಿಯ ವಿದೇಶಾಂಗ ಮಂತ್ರಿ ಮತ್ತು ಆದಿತ್ಯನಾಥ್ ಕುರಿತು ಮೌನ ವಹಿಸಿದ ಬಲಪಂಥೀಯರಿಂದ...

ಸೇನಾ ಹೆಲಿಕಾಪ್ಟರ್ ದುರಂತ: ಬಿಜೆಪಿಯ ವಿದೇಶಾಂಗ ಮಂತ್ರಿ ಮತ್ತು ಆದಿತ್ಯನಾಥ್ ಕುರಿತು ಮೌನ ವಹಿಸಿದ ಬಲಪಂಥೀಯರಿಂದ ಕೊಹ್ಲಿ ಮೇಲೆ ಕೆಂಗಣ್ಣು !

ಸಂಘಿ ಮಾಧ್ಯಮಗಳು ತಮ್ಮ ಅಜೆಂಡಾದಲ್ಲಿ ನಿರತವಾಗಿದೆಯೆಂದ ನೆಟ್ಟಿಗರು !

ನವದೆಹಲಿ: ಬುಧವಾರ ನಡೆದ ಸೇನಾ ಹೆಲಿಕಾಪ್ಟರ್ ದುರಂತದ ಸಮಯದಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಮಾಡಿದ್ದ ಟ್ವೀಟನ್ನು ಮಾತ್ರ ಉಲ್ಲೇಖಿಸಿ ಬಲಪಂಥೀಯ ಮಾಧ್ಯಮಗಳು ಅವರನ್ನು ಗುರಿಪಡಿಸಿದೆ. ಆದರೆ ಬಿಜೆಪಿಯ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ಕೇಂದ್ರ ವಿದೇಶಾಂಗ ಮಂತ್ರಿ ಜೈಶಂಕರ್ ಅವರು ಕೂಡಾ ಇದೇ ಸಮಯದಲ್ಲಿ ಮಾಡಿದ್ದ ಟ್ವೀಟ್ ಗಳಲ್ಲಿ ಕೇವಲ ಪ್ರಧಾನಿ ಮೋದಿಯನ್ನು ಹೊಗಳಿಕೆಗೆ ತಮ್ಮ ಟ್ವೀಟನ್ನು ಸೀಮಿತಿಗೊಳಿಸಿದ್ದು ಈ ಮಾಧ್ಯಮಗಳಿಗೆ ಕಾಣಿಸಲೇ ಇಲ್ಲ. ಈ ಕುರಿತು ನೆಟ್ಟಿಗರು, “ದುರಂತದ ಸಮಯದಲ್ಲೂ ಬಲಪಂಥೀಯ ಮಾಧ್ಯಮಗಳು ತಮ್ಮ ಅಜೆಂಡಾವನ್ನು ಹರಡುವುದರಲ್ಲಿ ಮಾತ್ರ ನಿರತವಾಗಿದೆ” ಎಂದು ಕಿಡಿ ಕಾರಿದ್ದಾರೆ.

ವಿರಾಟ್ ಕೊಹ್ಲಿ ಹೆಲಿಕಾಪ್ಟರ್ ದುರಂತದ ಕುರಿತು ಯಾವುದೇ ಟ್ವೀಟ್ ಮಾಡದೆ ಒಂದು ಜಾಹೀರಾತು ಶೂಟಿಂಗ್ ನ ಟ್ವೀಟ್ ಮಾಡಿದ್ದರು. ಅದರ ಜೊತೆಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ಡಾ. ಎಸ್. ಜಯಶಂಕರ್, ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಕೂಡಾ ಹೆಲಿಕಾಪ್ಟರ್ ದುರಂತದ ಕುರಿತು ಯಾವೊಂದು ಟ್ವೀಟನ್ನು ಮಾಡದೆ, ಪ್ರಧಾನಿ ಮೋದಿಯನ್ನು ವೈಭವೀಕರಿಸಿದ್ದರು. ಆದರೆ ಬಲಪಂಥೀಯ ಮಾಧ್ಯಮಗಳು ಕೇವಲ ವಿರಾಟ್ ಕೊಹ್ಲಿ ಟ್ವೀಟನ್ನು ಮಾತ್ರ ತಮ್ಮ ಟ್ರೋಲಿಗೆ ಬಳಸಿಕೊಂಡಿದೆ.

ಇದರಿಂದ ಅಕ್ರೋಶಗೊಂಡ ನೆಟ್ಟಿಗರು ಮಾಧ್ಯಮದ ಈ ನಡೆಯ ವಿರುದ್ಧ ಹರಿಹಾಯ್ದಿದ್ದರು. ಮಾತ್ರವಲ್ಲ ಬಿಜೆಪಿ ಎಂಬ ರಣಹದ್ದುಗಳಿಗೆ ತಮ್ಮ ಅಜೆಂಡಾದ ಬಗ್ಗೆ ಮಾತ್ರ ಕಾಳಜಿಯಿದೆ ಎಂದು ತಿಳಿಸಿದ್ದಾರೆ.

ಬುಧವಾರ ಹೆಲಿಕಾಪ್ಟರ್ ದುರಂತ ಸೇನಾ ಮುಖ್ಯಸ್ಥ ಸೇರಿ 13 ಮಂದಿ ಮೃತಪಟ್ಟ ಘಟನೆಯ ದುರಂತದಲ್ಲಿರುವಾಗ ಬಿಜೆಪಿಯ ಸಚಿವ ಮತ್ತು ಮುಖ್ಯಮಂತ್ರಿ ಪ್ರಧಾನಿಯನ್ನು ವೈಭವೀಕರಿಸುವುದು ಸರಿಯಲ್ಲ ಎಂದು ಟ್ವೀಟ್ ಮೂಲಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾ

Join Whatsapp
Exit mobile version