Home ಕರಾವಳಿ ಮಂಗಳೂರು | ಚರ್ಚ್ ಧ್ವಂಸ ಪ್ರಕರಣ: ಇಬ್ಬರ ಬಂಧನ

ಮಂಗಳೂರು | ಚರ್ಚ್ ಧ್ವಂಸ ಪ್ರಕರಣ: ಇಬ್ಬರ ಬಂಧನ

ಮಂಗಳೂರು: ಕೂಳೂರು ಸಮೀಪದ ಪಂಜಿಮೊಗರು, ಉರುಂದಾಡಿ ಗುಡ್ಡೆ ಎಂಬಲ್ಲಿ ಫೆ.5 ರಂದು ಸೈಂಟ್ ಆ್ಯಂಟನಿ ಹೋಲಿ ಕ್ರಾಸ್ ಚರ್ಚ್ ನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಬಜ್ಪೆಯ ಲತೀಶ್ ಮತ್ತು ಪಂಜಿಮೊಗರುವಿನ ಧನಂಜಯ್ ಎಂದು ಗುರುತಿಸಲಾಗಿದೆ,

40 ವರ್ಷಗಳ ಹಿಂದೆ ಸ್ಥಾಪಿಸಲಾದ ಚರ್ಚ್ ನ್ನು ಇತ್ತೀಚೆಗೆ ಕೆಡವಲಾಗಿತ್ತು. ಇದರಿಂದ ಆಕ್ರೋಶಗೊಂಡ ಕ್ರೈಸ್ತರು ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕೂಳೂರು ಜಂಕ್ಷನ್ ನಲ್ಲಿ ಧರಣಿ ನಡೆಸಿದ್ದರು.  

Join Whatsapp
Exit mobile version